
ಮಂಡ್ಯ[ಜು. 21] ಮಂಡ್ಯದ ಮಳವಳ್ಳಿಯಲ್ಲಿ JDS ಶಾಸಕ ಡಾ.ಅನ್ನದಾನಿ ನೀಡಿರುವ ಹೇಳಿಕೆ ನಾಳಿನ ವಿಶ್ವಾಸ ಮತಕ್ಕೂ ಮುನ್ನ ಸಂಚಲನ ಮೂಡಿಸಿದೆ. ಸರ್ಕಾರ ಉಳಿಯುತ್ತೆ. ಯಾವುದೇ ಸಮಸ್ಯೆ ಆಗಲ್ಲ. ಮುಂಬೈನಲ್ಲಿರೋ ಶಾಸಕರು ವಾಪಸ್ ಬರಲು, ನಮ್ಮೊಂದಿಗೆ ಮಾತನಾಡಲು ರೆಡಿ ಇದ್ದಾರೆ ಎಂದು ಹೇಳಿದ್ದಾರೆ.
ಆದರೆ ಅಲ್ಲಿನ ಬಿಜೆಪಿ ಸರ್ಕಾರ ಅವರನ್ನು ಬಲವಂತವಾಗಿ ಬಂಧಿಸಿದೆ. ಮಹಾರಾಷ್ಟ್ರ ಸರ್ಕಾರಕ್ಕೆ ತಾಕತ್ತಿದ್ದರೆ ಶಾಸಕರನ್ನು ಹೋಟೆಲ್ ನಿಂದ ಆಚೆಗೆ ಕಳುಹಿಸಲಿ. ಅತೃಪ್ತ ಶಾಸಕರು ವಿಶ್ವಾಸ ಮತಯಾಚನೆಗೆ ಬರಲಿ ಬಿಜೆಪಿ ಗೆ ಮತ ಹಾಕಿದ್ರೆ ಹಾಕಿಸಿಕೊಳ್ಳಿ., ಅವರಿಗೆ ಮಂತ್ರಿ ಹಾಗೂ ಹಣದ ಆಮಿಷವೊಡ್ಡಲಾಗಿದೆ ಎಂದು ಆರೋಪಿಸಿದರು.
ವಿಧಾನಸಭೆಗೆ ಸ್ಪೀಕರ್ ಅವರೇ ಸುಪ್ರೀಂ. ರಾಜ್ಯಪಾಲರು ಏನು ಮಾಡಲು ಸಾಧ್ಯ ಇಲ್ಲ. ಇದನ್ನ ಸುಪ್ರೀಂಕೋರ್ಟ್ ಸಹ ಹೇಳಿದೆ. ನಾನು ಜೆಡಿಎಸ್ ಗೆ ವರ್ಜಿನಲ್ ಪೀಸ್. ಕುಮಾರಸ್ವಾಮಿಯ ಅಪ್ಪಟ ಅಭಿಮಾನಿ. ನಾನು ಹಣ, ಆಮಿಷಕ್ಕೆ ಮಾರಾಟ ಆಗುವ ವ್ಯಕ್ತಿ ಅಲ್ಲ. ಎಲ್ಲರೂ ಒಗ್ಗಟ್ಟಾಗಿ ರೆಸಾರ್ಟ್ ನಲ್ಲಿ ಇದ್ದೆವು. ಕಾರ್ಯಕ್ರಮ ನಿಮಿತ್ತ ಕ್ಷೇತ್ರಕ್ಕೆ ಬಂದಿದ್ದೇವೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.