
ಕೊಡಗು[ಜ.28] ‘ಭಾರತ ರತ್ನ ಯಕ್ಕಡಕ್ಕೆ ಸಮ' ಎಂದು ಕಾಂಗ್ರೆಸ್ ನಾಯಕರೊಬ್ಬರು ಸ್ಟೇಟಸ್ ಹಾಕಿದ್ದಾರೆ. ಭಾರತ ರತ್ನಕ್ಕೆ ಕಾಂಗ್ರೆಸ್ ನಾಯಕ ಅಪಚಾರ ಮಾಡಿದ್ದಾರೆ. ಐಎನ್ಟಿಯುಸಿ ಜಂಟಿ ಕಾರ್ಯದರ್ಶಿ ಇಂಥ ಸ್ಟೇಟಸ್ ಹಾಕಿದ್ದಾರೆ. ನಾಪಂಡ ಮುದ್ದಪ್ಪ ಹಾಕಿರುವ ಸ್ಟೇಟಸ್ ಹಲವು ಚರ್ಚೆಗೆ ಕಾರಣವಾಗಿದೆ.
ಸಿದ್ಧಗಂಗಾ ಶ್ರೀಗಳಿಗೆ ಏಕಿಲ್ಲ ಭಾರತ ರತ್ನ?
ಸಿದ್ಧಗಂಗಾ ಸ್ವಾಮೀಜಿಯವರಿಗೆ ಭಾರತ ರತ್ನ ಸಿಕ್ಕಿಲ್ಲ ಎಂಬ ಕಾರಣವನ್ನೇ ಇಟ್ಟುಕೊಂಡು ಈ ರೀತಿ ಬರೆದಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಕೇಳಲಾಗಿದೆ. ಒಟ್ಟಿನಲ್ಲಿ ಒಂದು ವಿಷಯವನ್ನು ಜನರ ಮುಂದಿಡುವ ಭರದಲ್ಲಿ ಕಾಂಗ್ರೆಸ್ ನಾಯಕರೊಬ್ಬರು ಅತ್ಯುನ್ನತ ಪ್ರಶಸ್ತಿಗೆ ಅವಮಾನ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.