ಸಂಪುಟ ಸಭೆಗೆ ರಮೇಶ್ ಜಾರಕಿಹೊಳಿ ಚಕ್ಕರ್... ದೋಸ್ತಿಗೆ ಕೊಟ್ರಾ ಠಕ್ಕರ್?

Published : Dec 05, 2018, 05:00 PM ISTUpdated : Dec 05, 2018, 08:16 PM IST
ಸಂಪುಟ ಸಭೆಗೆ ರಮೇಶ್ ಜಾರಕಿಹೊಳಿ ಚಕ್ಕರ್...  ದೋಸ್ತಿಗೆ ಕೊಟ್ರಾ ಠಕ್ಕರ್?

ಸಾರಾಂಶ

ಸಚಿವ ಸಂಪುಟ ಸಭೆಗೆ ರಮೇಶ್ ಜಾರಕಿಹೊಳಿ ಗೈರಾಗಿದ್ದಾರೆ. ಭಿನ್ನಮತದ ಮಾತುಗಳು ಕೇಳಿ ಬರುತ್ತಿರಿವುದು..ಸಚಿವ ಸಂಪುಟ ಸಭೆಗೆ ರಮೇಶ್ ಜಾರಕಿಹೊಳೆ ಮತ್ತೆ ಮತ್ತೆ ಗೈರಾಗುತ್ತಿರುವುದಕ್ಕೆ ಸಂಬಂಧ  ಇದೆಯೇ?

ಬೆಂಗಳೂರು[ಡಿ.05]  ರಮೇಶ್ ಜಾರಕಿಹೊಳಿಗೆ ಸ್ಕಾರದ ಮೇಲೆ ಉಂಟಾಗಿರುವ ಮುನಿಸು ಕಡಿಮೆ ಆದಂತೆ ಕಾಣುತ್ತಿಲ್ಲ. ಸಿಎಂ ನೇತೃತ್ವದಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಗೆ ಜಾರಕೊಹೊಳಿ ಗೈರಾಗಿದ್ದಾರೆ.

ಕಳೆದ ಸಾರಿ ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಚರ್ಚೆ ಇದ್ದ ಕಾರಣ ಬಲವಂತಕ್ಕೆ ಸಂಪುಟ ಸಭೆಗೆ ಬಂದಿದ್ದ ಜಾರಕಿಹೊಳಿ ಬಂದಿದ್ದರು. ಸಕ್ಕರೆ ಕಾರ್ಖಾನೆ ಮಾಲೀಕರು ಆಗಿರುವ ಜಾರಕಿಹೊಳಿಯವರ ಮೇಲೆ ಬಾಕಿ ಪಾವತಿ ಒತ್ತಡವೂ ಇತ್ತು.

"

‘ಸ್ವಯಂ ಘೋಷಿತ ಮಣ್ಣಿನ ಮಕ್ಕಳೆ, ರೈತರಿಗೆ ಮಣ್ಣು ತಿನ್ನಿಸ್ತಿದ್ದಾರೆ’

ಒಂದು ಕಡೆ ಮಾತನಾಡುತ್ತ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಕರ್ನಾಟಕ ರಾಜಕಾರಣದಲ್ಲಿ ಕಂಪನ ಆಗಲಿದೆ ಎನ್ನುತ್ತಾರೆ, ರಮೇಶ್ ಜಾರಕಿಹಪಳಿ ಸಹೋದರ ಸತೀಶ್ ಜಾರಕಿಹೊಳಿ ಬೆಳಗಾವಿಯಲ್ಲಿ ಓಡಾಡ ಮಾಡುತ್ತ ರೆಸಾರ್ಟ್ ಒಂದನ್ನು ಪರಿಶೀಲನೆ ಮಾಡಿಕೊಂಡು ಬರುತ್ತಾರೆ. ಈ ಮಧ್ಯೆ ಶ್ರೀರಾಮಲು ಆಪ್ತ ಎನ್ನಲಾದ ವ್ಯಕ್ತಿ ದುಬೈ ಮೂಲದ ಉದ್ಯಮಿಯೊಬ್ಬರ ಜತೆ ಆಪರೇಶನ್ ಕಮಲದ ವಿಚಾರ ಮಾತನಾಡಿರುವ ಆಡಿಯೋ ಮಾಧ್ಯಮಗಳ ಕೈಗೆ ಸಿಗುತ್ತದೆ.

ಒಟ್ಟಿನಲ್ಲಿ ಈ ಎಲ್ಲ ಬೆಳವಣಿಗೆಗಳು ರಾಜ್ಯ ರಾಜಕಾರಣದಲ್ಲಿ ಯಾರಿಗೂ ಗೊತ್ತಾಗದ ಏನೋ ಒಂದು ಚಟುವಟಿಕೆ ಹಿನ್ನೆಲೆಯಲ್ಲಿ ನಡೆಯುತ್ತಿದೆ ಎಂಬುದನ್ನು ಸಾರಿ ಹೇಳುತ್ತಿದೆ. ಇನ್ನೊಂದು ಕಡೆ ಸಚಿವ ಸಂಪುಟ ವಿಸ್ತರಣೆಯೂ ಸಮಸ್ಯೆಯಾಗಿದ್ದು ಕಾಂಗ್ರೆಸ್‌ಗೆ ತನ್ನ ಪಟ್ಟಿ ಅಂತಿಮಮ ಮಾಡಲು ಸಾಧ್ಯವಾಗುತ್ತಿಲ್ಲ. ಸಂಪುಟ ಸಭೆಗೆ ಗೈರಾಗುವುದು ಮಾತ್ರವಲ್ಲ ಸರ್ಕಾರಿ ಕಾರು ಬಳಕೆಯನ್ನು ರಮೇಶ್ ಜಾರಕಿಹೊಳಿ ನಿಲ್ಲಿಸಿದ್ದಾರೆ. 

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2019ರಲ್ಲಿ 6 ಸಾವಿರಕ್ಕೆ ಕೆಲಸ, ಕೆಪಿಎಸ್ಸಿ ಸದಸ್ಯನಾದ ಬಳಿಕ 100 ಎಕರೆ ಜಮೀನು: ಇದು 'ನುಂಗಪ್ಪ' ಸಾಹುಕಾರ್‌ ಸ್ಟೋರಿ
3700 ಸರ್ಕಾರಿ ಶಾಲೆ, ಕಾಲೇಜಲ್ಲಿ ಸದ್ಯದಲ್ಲೇ ಸ್ಮಾರ್ಟ್‌ ಕ್ಲಾಸ್‌ ಶುರು, ಖಾಸಗಿ ಶಾಲೆಗಳ ಮಾದರಿ ಡಿಜಿಟಲ್‌ ಶಿಕ್ಷಣಕ್ಕೆ ಸರ್ಕಾರ ಸಿದ್ಧತೆ