
ಬೆಳಗಾವಿ(ಡಿ.18) ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್ ನಲ್ಲಿ ಹಲವರಿಂದ ಪೈಪೋಟಿ ಆರಂಭವಾಗಿದೆ. ಖಾಲಿ ಇರುವ 6 ಸಚಿವ ಸ್ಥಾನಕ್ಕೆ ಸುಮಾರು ಒಂದು ಡಜ್ಜನ್ ಶಾಸಕರು ರೇಸ್ನಲ್ಲಿದ್ದಾರೆ.
ಲಿಂಗಾಯತ ಕೋಟಾದಲ್ಲಿ ಬಿಸಿ .ಪಾಟೀಲ್, ಎಚ್ಕೆ .ಪಾಟೀಲ್, ಬಿಕೆ.ಸಂಗಮೇಶ್, ಕುರುಬ ಸಮುದಾಯದ ಕೋಟಾದಲ್ಲಿ ಎಂಟಿಬಿ ನಾಗರಾಜ್ ಹೆಸರಿದೆ. ಇನ್ನು ಅಲ್ಪಸಂಖ್ಯಾತ ಕೋಟಾದಲ್ಲಿ ರೋಷನ್ ಬೇಗ್, ತನ್ವೀರ್ ಸೇಠ್ ನಡುವೆ ಸ್ಪರ್ಧೆ ಏರ್ಪಟ್ಟಿದೆ.
ಸ್ಥಾನ ಕಳೆದುಕೊಳ್ಳಲಿದ್ದಾರಾ ಸಚಿವರು..?
ಇದಲ್ಲದೆ ಜಿಲ್ಲಾವಾರು ಸಹ ಹೋರಾಟ ಏರ್ಪಟ್ಟಿದ್ದು ಬಳ್ಳಾರಿ ಜಿಲ್ಲೆ ಕೋಟಾದಲ್ಲಿ ಇ.ತುಕಾರಾಂ ಹಾಗೂ ಬಿ.ನಾಗೇಂದ್ರ ಸಚಿವ ಸ್ಥಾನಕ್ಕಾಗಿ ಪೈಪೋಟಿ ನೀಡುತ್ತಿದ್ದಾರೆ.
ಮಾಜಿ ಸಚಿವರಾದ ಎಂ.ಬಿ.ಪಾಟೀಲ್, ಆರ್.ಬಿ.ತಿಮ್ಮಾಪುರ, ರಾಮಲಿಂಗಾರೆಡ್ಡಿ ಹೊಸ ಮುಖಗಳಾದ ಸಿ.ಎಸ್.ಶಿವಳ್ಳಿ, ರಹೀಂಖಾನ್ ಹಾಗೂ ರೂಪಾ ಶಶಿಧರ್ ಹೆಸರು ಸಹ ಸಚಿವ ಸ್ಥಾನದ ರೇಸ್ನಲ್ಲಿದ್ದಾರೆ.
ರಾಷ್ಟ್ರ ರಾಜಕಾರಣಕ್ಕೆ ಸಚಿವ ರಮೇಶ್ ಜಾರಕಿಹೊಳಿ ಹೊರಟರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.