15 ವರ್ಷದ ನಂತರ ಜಾರಕಿಹೊಳಿ ಕುಟುಂಬಕ್ಕೆ ತಪ್ಪಿದ ಮಂತ್ರಿಗಿರಿ... ಯಾಕೆ ಹೀಗಾಯ್ತು?

Published : Aug 20, 2019, 04:45 PM ISTUpdated : Aug 20, 2019, 05:06 PM IST
15 ವರ್ಷದ ನಂತರ ಜಾರಕಿಹೊಳಿ ಕುಟುಂಬಕ್ಕೆ ತಪ್ಪಿದ ಮಂತ್ರಿಗಿರಿ... ಯಾಕೆ ಹೀಗಾಯ್ತು?

ಸಾರಾಂಶ

ಜಾರಕಿಹೊಳಿ ಕುಟುಂಬಕ್ಕೆ ಈ ಬಾರಿ ಸಂಪುಟದಲ್ಲಿ ಸ್ಥಾನ ಇಲ್ಲ/ ಯಾವುದೇ ಸರ್ಕಾರ ಬಂದರೂ ಕುಟುಂಬದವರಿಗೊಂದು ಸ್ಥಾನ ಗ್ಯಾರಂಟಿ ಇರ್ತಿತ್ತು/ ಬಾಲಚಂದ್ರ ಜಾರಕಿಹೊಳಿ ಕೆಐ ಬಿಡಲು ಯಾರು ಕಾರಣ?

ಬೆಂಗಳೂರು(ಆ.20)  ಬಿಎಸ್ ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆಯಾಗಿದೆ. ಆದರೆ ಜಾರಕಿಹೊಳಿ ಕುಟುಂಬದವರ ಹೆಸರು ಇಲ್ಲ. ಸಹಜವಾಗಿಯೇ ಬೆಳಗಾವಿಯಲ್ಲಿ ಜಾರಕಿಹೊಳಿ ಕುಟುಂಬದ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ತಪ್ಪಿರುವುದಕ್ಕೆ ಬೆಂಬಲಿಗರು ಅಸನಾಧಾನ ಹೊರಹಾಕಿದ್ದಾರೆ.

ಸಹೋದರರ ಪಟ್ಟಿ: ರಮೇಶ್, ಸತೀಶ್, ಬಾಲಚಂದ್ರ ಮತ್ತು ಲಖನ್ ಜಾರಕಿಹೊಳಿ ಸಹೋದರರು ರಾಜಕೀಯವಾಗಿ ತುಂಬಾ ಪ್ರಬಲರು. ಅದರಲ್ಲಿಯೂ ಬೆಳಗಾವಿಯಲ್ಲಿ ಪಾರಂಪರಾಗತವಾಗಿ ತಮ್ಮ ಹಿಡಿತ ಸಾಧಿಸಿಕೊಂಡು ಬಂದಿದ್ದಾರೆ. ಆದರೆ ಈ ಸಾರಿಯ ಸಂಪುಟದಲ್ಲಿ ಜಾರಕಿಹೊಳಿ ಫ್ಯಾಮಿಲಿಗೆ ಮಂತ್ರಿಗಿರಿ ಇಲ್ಲ.

ರಾಜಕೀಯ ಪಕ್ಷಗಳು: ಬಾಲಚಂದ್ರ ಜಾರಕಿಹೊಳಿ ಬಿಜೆಪಿಯಲ್ಲಿದ್ದು ಅರಬಾವಿಯ ಶಾಸಕರು.. ಇನ್ನು ಸತೀಶ್ ಜಾರಕಿಹೊಳಿ ಕಾಂಗ್ರೆಸ್ ನಲ್ಲಿದ್ದು ಯಮಕನಮರಡಿ ಶಾಸಕರು. ರಮೇಶ್ ಜಾರಿಹೊಳಿ ಗೋಕಾಕ್ ಶಾಸಕರಾಗಿದ್ದು ಇದೀಗ ಅನರ್ಹ. ಇನ್ನು ಲಖನ್ ಜಾರಕಿಹೊಳಿ ರಾಜಕಾರಣದಿಂದ ದೂರ ಉಳಿದಿದಿದ್ದು ಗೋಕಾಕ್ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎಂಬ ಮಾತುಗಳು ಇವೆ.

 13 ಜಿಲ್ಲೆಯ 17 ಶಾಸಕರಿಗೆ ಮಂತ್ರಿ ಭಾಗ್ಯ; ಲಿಂಗಾಯತರಿಗೆ ಸಿಂಹಪಾಲು

2006ರಿಂದ ತಪ್ಪದ ಮಂತ್ರಿಗಿರಿ: ಕುಮಾರಸ್ವಾಮಿ ಮತ್ತು ಬಿಎಸ್ ವೈ ನೇತೃತ್ವದ ದೋಸ್ತಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಬಾಲಚಂದ್ರ ಜಾರಕಿಹೊಳಿ ಬಿಜೆಪಿಯಿಂದ ಸಮಾಜ ಕಲ್ಯಾಣ ಸಚಿವರಾದರು. ನಂತರ 2008ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಏರಿದಾಗಲೂ ಬಾಲಚಂದ್ರ ಜಾರಕಿಹೊಳಿ ಸಚಿವ ಸ್ಥಾನ ಕಾಯ್ದುಕೊಂಡರು.. ಇದಾದ ಮೇಲೆ ಸಿದ್ದರಾಮಯ್ಯ ಸರ್ಕಾರ ಬಂದಾಗ ಮೊದಲಿಗೆ ರಮೇಶ್ ಜಾರಕಿಹೊಳಿ, ನಂತರ ಸತೀಶ್ ಸಚಿವರಾದರು. ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿ ಸರ್ಕಾರ ಬಂದಾಗ ರಮೇಶ್ ಮತ್ತು ಸತೀಶ್ ಇಬ್ಬರು ಕೆಲ ಕಾಲ ಮಂತ್ರಿಯಾಗಿದ್ದರು.

ರಾಜಭವನದಲ್ಲಿ ಪ್ರಮಾಣ ವಚನ: ಸಿಎಂ ಯಡಿಯೂರಪ್ಪ ಸಂಪುಟ ಸೇರಿದ ಸಚಿವರಿವರು!

ಬದಲಾದ ರಾಜಕೀಯ ವಾತಾವರಣ: ಆದರೆ ಇದೀಗ ರಾಜ್ಯದಲ್ಲಿ ರಾಜಕಾರಣದ ವಾತಾವರಣವೇ ಬದಲಾಗಿದೆ. ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿಯೇ ಹದಿನೇಳು ಶಾಸಕರು ರಾಜೀನಾಮೆ ಕೊಟ್ಟ ಪರಿಣಾಮ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಮೊದಲ ಹಂತದಲ್ಲಿ 17 ಜನರೇ ಸಚಿವರಾಗಿ ಪ್ರಮಾಣ ತೆಗೆದುಕೊಂಡಿದ್ದು ಜಾರಕಿಹೊಳಿ ಕುಟುಂಬ ಮಿಸ್ ಆಗಿದೆ.

ಪ್ರವಾಹ ಪರಿಸ್ಥಿತಿ ನಿಭಾಯಿಸಲು ತೆರಳಿದ್ದ ಬಾಲಚಂದ್ರ ಜಾರಕಿಹೊಳಿ ನಿಮಗೆಲ್ಲ ಮನೆ ಕಟ್ಟಿಕೊಡದಿದ್ದರೆ ಈ ಸರ್ಕಾರವನ್ನು ಕೆಡವುತ್ತೇನೆ ಎಂದು ಹೇಳಿದ್ದರು. ಎರಡನೇ ಹಂತದಲ್ಲಿ ಬಾಲಚಂದ್ರ ಅಥವಾ ರಮೇಶ್ ಸಚಿವರಾಗಬಹುದು ಎಂದು ಹೇಳಲಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು: ಚಾರಿತ್ರಿಕ ಆದೇಶಕ್ಕೆ ಕಾನೂನು ಬಲ
ಹೈಕಮಾಂಡ್‌ ನಿರ್ಧಾರ ಫೈನಲ್, ಪದೇ ಪದೆ ಯಾಕೆ ಕೇಳ್ತೀರಿ?: ಸಿಎಂ ಸಿದ್ದರಾಮಯ್ಯ