ರಾಜ್ಯಪಾಲರ ಡಬಲ್ ಡೆಡ್‌ಲೈನ್ ಡೆಡ್, ಸೋಮವಾರಕ್ಕೆ ಸದನ

Published : Jul 19, 2019, 08:47 PM ISTUpdated : Jul 19, 2019, 08:55 PM IST
ರಾಜ್ಯಪಾಲರ ಡಬಲ್ ಡೆಡ್‌ಲೈನ್ ಡೆಡ್, ಸೋಮವಾರಕ್ಕೆ ಸದನ

ಸಾರಾಂಶ

ರಾಜ್ಯಪಾಲರ ಡಬಲ್ ಡೆಡ್ ಲೈನ್ ಮುಗಿದಿದೆ. ಆದರೆ ದೋಸ್ತಿ ಸರ್ಕಾರ ವಿಶ್ವಾಸ ಮತ ಸಾಬೀತು ಮಾಡಿಲ್ಲ. ಇದೀಗ ಸೋಮವಾರ ಅಂದರೆ ಜುಲೈ 22ಕ್ಕೆ ಕಲಾಪ ಮುಂದೂಡಿದ ಸ್ಪೀಕರ್ ತಮ್ಮ ಕುರ್ಚಿಯಿಂದ ಎದ್ದು ಹೋಗಿದ್ದಾರೆ.

ಬೆಂಗಳೂರು[ಜು. 19] ಕರ್ನಾಟಕದ ರಾಜಕೀಯ ಗೊಂದಲಗಳು ಇಂದು ಕೊನೆಯಾಗಬಹುದು, ನಾಳೆ ಕೊನೆಯಾಗಬಹುದು ಎಂದುಕೊಳ್ಳುತ್ತಿರುವವರು ಇನ್ನು ಮೂರು ದಿನ ಕಾಯಬೇಕಾಗಿದೆ. ಶುಕ್ರವಾರದ ಕಲಾಪವೂ ಗೊಂದಲಗಳ ನಡುವೆಯೇ ಅಂತ್ಯವಾಗಿದೆ.

ಬೆಳಗ್ಗೆಯಿಂದಲೂ ಆರಂಭವಾದ ಚರ್ಚೆ ರಾತ್ರಿ 8.30ರವರೆಗೆ ನಡೆಯಿತು.  ವಿರೋಧ ಪಕ್ಷ ಬಿಜೆಪಿಯವರು ತಾಳ್ಮೆಯಿಂದ ಕುಳಿತುಕೊಂಡಿದ್ದರೆ ಆಡಳಿತ ಪಕ್ಷದ ಶಾಸಕರು ಒಬ್ಬರಾದ ಮೇಲೆ ಒಬ್ಬರು ಸುದೀರ್ಘ ಭಾಷಣ ಮಾಡಿದರು.

ಕೇಂದ್ರಕ್ಕೆ ರಾಜ್ಯಪಾಲರ ವರದಿ, ರಾಷ್ಟ್ರಪತಿ ಆಳ್ವಿಕೆ ಜಾರಿ?

ಇತಿಹಾಸ, ತಾವು ಆಯ್ಕೆಯಾದ ಕ್ಷೇತ್ರ, ರಾಜ್ಯದ ಜನರು ಏನು ಅಂದುಕೊಳ್ಳುತ್ತಿದ್ದಾರೆ ಎಂಬೆಲ್ಲ ವಿಚಾರಗಳ ಮೇಲೆ ಒಬ್ಬರಾದ ಮೇಲೆ ಒಬ್ಬರು ಮ್ಯಾರಥಾನ್ ಭಾಷಣ ಮಾಡಿದರು. ಅರಸೀಕೆರೆ ಶಾಸಕ ಶಿವಲಿಂಗೇಗೌಡ, ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಮ್ಮೀ ಹೆಬ್ಬಾಳ್ಕರ್, ಬಸವಕಲ್ಯಾಣ ಶಾಸಕ ನಾರಾಯಣ ರಾವ್ ಉದ್ದುದ್ದ ಭಾಷಣ ಮಾಡಿ ಅಭಿಪ್ರಾಯ ಹೊರಹಾಕಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ ಕಳೆದ 10 ವರ್ಷಗಳಲ್ಲೇ ದಾಖಲೆಯ ಚಳಿ, ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಬೆಂಗಳೂರಿನಲ್ಲಿ ಮುಂದಿನ 1 ವಾರ ಹೇಗಿರಲಿದೆ?
Share Market: ರಿಲಯನ್ಸ್ ಷೇರಿನ ಹೆಸರಲ್ಲಿ ಬೆಂಗಳೂರು ಉದ್ಯಮಿಗೆ ₹8 ಕೋಟಿ ವಂಚನೆ!