ನಾವು ಋಷಿಮುನಿಗಳ ಸಂತಾನ: ಡಾರ್ವಿನ್ ಸಿದ್ಧಾಂತ ಧಿಕ್ಕರಿಸಿದ ಬಿಜೆಪಿ ಸಂಸದ!

Published : Jul 19, 2019, 07:11 PM ISTUpdated : Jul 19, 2019, 09:13 PM IST
ನಾವು ಋಷಿಮುನಿಗಳ ಸಂತಾನ: ಡಾರ್ವಿನ್ ಸಿದ್ಧಾಂತ ಧಿಕ್ಕರಿಸಿದ ಬಿಜೆಪಿ ಸಂಸದ!

ಸಾರಾಂಶ

ಡಾರ್ವಿನ್ ಜೀವ ವಿಕಾಸ ಸಿದ್ಧಾಂತ ತಿರಸ್ಕರಿಸಿದ ಬಿಜೆಪಿ ಸಂಸದ| ಲೋಕಸಭೆಯಲ್ಲಿ ಡಾರ್ವಿನ್ ಸಿದ್ಧಾಂತ ಒಪ್ಪಲ್ಲ ಎಂದ ಸತ್ಯಪಾಲ್ ಸಿಂಗ್| ಭಾರತೀಯರು ಪುರಾತನ ಋಷಿಮುನಿಗಳ ಸಂತಾನ ಎಂದ ಸತ್ಯಪಾಲ್| ಡಾರ್ವಿನ್’ನ ಮಂಗನಿಂದ ಮಾನವ ಸಿದ್ಧಾಂತ ಸುಳ್ಳು ಬಿಜೆಪಿ ಸಂಸದ| 

ನವದೆಹಲಿ(ಜು.19): ಭಾರತೀಯರು ಋಷಿಮುನಿಗಳ ಸಂತಾನ ಎಂಬುದು ತಮ್ಮ ನಂಬಿಕೆಯಾಗಿದ್ದು, ಚಾರ್ಲ್ಸ್ ಡಾರ್ವಿನ್’ನ ಜೀವ ವಿಕಾಸ ಸಿದ್ಧಾಂತವನ್ನು ತಿರಸ್ಕರಿಸುವುದಾಗಿ ಬಿಜೆಪಿ ಸಂಸದ ಸತ್ಯಪಾಲ್ ಸಿಂಗ್ ಹೇಳಿದ್ದಾರೆ.

ಲೋಕಸಭೆಯಲ್ಲಿ ಇಂದು ಮಾತನಾಡಿದ ಸತ್ಯಪಾಲ್ ಸಿಂಗ್, ಭಾರತೀಯರು ಪುರಾತನ ಋಷಿಮುನಿಗಳ ಸಂತಾನರಾಗಿದ್ದು, ಡಾರ್ವಿನ್’ನ ಮಂಗನಿಂದ ಮಾನವ ಸಿದ್ಧಾಂತವನ್ನು ತಾವು ಒಪ್ಪುವದಿಲ್ಲ ಎಂದು ಹೇಳಿದ್ದಾರೆ.

ಮಾನವ ಹಕ್ಕುಗಳ ಕಾನೂನು ತಿದ್ದುಪಡಿ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ ಸತ್ಯಪಾಲ್ ಸಿಂಗ್ ಈ ಹೇಳಿಕೆ ನೀಡಿದ್ದಾರೆ. ನಾವು ಋಷಿಮುನಿಗಳ ಪುತ್ರರಾಗಿದ್ದು, ನಮ್ಮ ಸಂಸ್ಕೃತಿಯಲ್ಲಿ ಮಾನವ ಹಕ್ಕು ಎಂಬ ಕಲ್ಪನೆಯೇ ಇಲ್ಲ ಎಂದು ಸತ್ಯಪಾಲ್ ವಾದಿಸಿದರು.

ಇನ್ನು ಸತ್ಯಪಾಲ್ ಹೇಳಿಕೆಗೆ ತೀವ್ರ ಅಚ್ಚರಿ ವ್ಯಕ್ತಪಡಿಸಿದ ವಿಪಕ್ಷ ಸದಸ್ಯರು, ಸಂಸದರ ಮಾನವ ಹಕ್ಕುಗಳ ಕುರಿತಾದ ಹೇಳಿಕೆ ಅಚ್ಚರಿ ಮೂಡಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದವು. 

ಬಿಜೆಪಿ ಸಂಸದ ಸತ್ಯಪಾಲ್ ಸಿಂಗ್, ಮೋದಿ 1.0 ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದರು ಎಂಬುದು ವಿಶೇಷ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ಮಾದೇಶ್ವರ ದಯಬಾರದೆ..' ಯೂಟ್ಯೂಬ್‌ನಲ್ಲಿ ಟ್ರೆಂಡ್‌ ಆದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದಪ್ರಸಾದ್‌ ಹಾಡು!
ರಾಜ್ಯಾದ್ಯಂತ ಎಲ್‌ಕೆಜಿ ಯಿಂದ ಪಿಯುಸಿವರೆಗೆ ಕಲಿಕಾ ಸಮಯದ ಅವಧಿ ಬದಲಾಯಿಸುವಂತೆ ಶಿಕ್ಷಣ ಇಲಾಖೆಗೆ ಮಕ್ಕಳ ಆಯೋಗ ಪತ್ರ