ಕಾನ್ಪುರ ರೈಲು ದುರಂತ: ಸಾವಿನ ಸಂಖ್ಯೆ 145ಕ್ಕೆ ಏರಿಕೆ

Published : Nov 21, 2016, 10:20 AM ISTUpdated : Apr 11, 2018, 12:46 PM IST
ಕಾನ್ಪುರ ರೈಲು ದುರಂತ: ಸಾವಿನ ಸಂಖ್ಯೆ 145ಕ್ಕೆ ಏರಿಕೆ

ಸಾರಾಂಶ

ಪತ್ತೆಯಾದ ಮೃತದೇಹಗಳ ಪೈಕಿ 123 ಮಂದಿಯ ಗುರುತು ಪತ್ತೆಯಾಗಿದೆ, ಹಾಗೂ 110 ಮಂದಿಯ ಮೃತರ ದೇಹವನ್ನು ಈಗಾಗಲೇ ಕುಟುಂಬದವರಿಗೆ ವಶಕ್ಕೆ ನೀಡಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸ್ ಮಹಾ-ನಿರೀಕ್ಷಿಕ ಜಾವೇದ್ ಆಹಮದ್ ತಿಳಿಸಿದ್ದಾರೆ.

ಕಾನ್ಪುರ(ನ.21): ಇಂದೋರ್-ಪಾಟ್ನಾ ಎಕ್ಸ್'ಪ್ರೆಸ್ ರಯಲು ದುರ್ಘಟನೆಯಲ್ಲಿ ಮಡಿದವರ ಸಂಖ್ಯೆ 145ಕ್ಕೆ ಏರಿದೆ. ಇದರೊಂದಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣೆ ತಂಡದ ಕಾರ್ಯಾಚರಣೆಯೂ ಕೂಡಾ ಮುಕ್ತಾಯಗೊಂಡಿದೆ.

250 ಸದಸ್ಯರ ವಿಪತ್ತು ನಿರ್ವಹಣೆ ತಂಡವು ಮೃತದೇಹ ಹಾಗೂ ಗಾಯಗೊಂಡವರ ರಕ್ಷಣೆಗಾಗಿ ಸತತ 30 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದೆ.

ಪತ್ತೆಯಾದ ಮೃತದೇಹಗಳ ಪೈಕಿ 123 ಮಂದಿಯ ಗುರುತು ಪತ್ತೆಯಾಗಿದೆ, ಹಾಗೂ 110 ಮಂದಿಯ ಮೃತರ ದೇಹವನ್ನು ಈಗಾಗಲೇ ಕುಟುಂಬದವರಿಗೆ ವಶಕ್ಕೆ ನೀಡಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸ್ ಮಹಾ-ನಿರೀಕ್ಷಿಕ ಜಾವೇದ್ ಆಹಮದ್ ತಿಳಿಸಿದ್ದಾರೆ.

ಭಾನುವಾರ ನಸುಕಿನ ಜಾವದಲ್ಲಿ ಇಂದೋರ್-ಪಾಟ್ನಾ ಎಕ್ಸ್'ಪ್ರೆಸ್ ಕಾನ್ಪುರ ಬಳಿ ಹಳಿ ತಪ್ಪಿತ್ತು. ಘಟನೆಗೆ ಸಂಬಂಧಿಸಿದಂತೆ ಕೇಂದ್ರ ರೈಲು ಸಚಿವ ಸುರೇಶ್ ಪ್ರಭು ತನಿಖೆಗೆ ಆದೇಶಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು
ಪಿಯುಸಿ ಸರ್ಟಿಫಿಕೇಟ್ ಇದ್ದರೆ ಮಾತ್ರ ವಾಹನಕ್ಕೆ ಪೆಟ್ರೋಲ್ -ಡೀಸೆಲ್, ಡಿ.18ರಿಂದ ಹೊಸ ನಿಯಮ