70 ಕೋಟಿ ಆಸೆಗೆ 20 ಲಕ್ಷ ಕಳೆದುಕೊಂಡ ಎಸ್. ನಾರಾಯಣ್

Published : Aug 31, 2018, 01:49 PM ISTUpdated : Sep 09, 2018, 09:35 PM IST
70 ಕೋಟಿ ಆಸೆಗೆ 20 ಲಕ್ಷ ಕಳೆದುಕೊಂಡ ಎಸ್. ನಾರಾಯಣ್

ಸಾರಾಂಶ

70 ಕೋಟಿ ಆಸೆಗೆ ಸ್ಯಾಂಡಲ್ ವುಡ್ ನಿರ್ದೇಶಕ ಎಸ್. ನಾರಾಯಣ್  20 ಲಕ್ಷ ಹಣವನ್ನು ಕಳೆದುಕೊಂಡಿದ್ದಾರೆ. ಜ್ಯೋತಿಷಿಯೋರ್ವರಿಂದ ಅವರು ವಂಚನೆಗೆ ಒಳಗಾಗಿದ್ದಾರೆ. 

ಬೆಂಗಳೂರು :  ಕಡಿಮೆ ಬಡ್ಡಿಯ ಸಾಲದ ಆಸೆಯಿಂದ ನಿರ್ದೇಶಕ ಎಸ್. ನಾರಾಯಣ್ ಮೋಸ ಹೋಗಿದ್ದಾರೆ.  70 ಕೋಟಿಯ ಆಸೆಗಾಗಿ 20 ಲಕ್ಷ ಹಣವನ್ನು ಕಳೆದುಕೊಂಡಿದ್ದಾರೆ.  

ಕಡಿಮೆ ಬಡ್ಡಿಗೆ 70 ಕೋಟಿ ಸಾಲ ನೀಡುವುದಾಗಿ ಹೇಳಿದ್ದ ತಮಿಳುನಾಡು ಮೂಲದ ಜ್ಯೋತಿಷಿ ಮಂದಾರ ಮೂರ್ತಿಯಿಂದ  ಎಸ್. ನಾರಾಯಣ್ ಮೋಸ ಹೋಗಿದ್ದಾರೆ. 

ಸಾಲಕ್ಕಾಗಿ 20 ಲಕ್ಷ ನಿರ್ವಹಣಾ ಶುಲ್ಕ ಪಡೆದಿದ್ದ ಜ್ಯೋತಿಷಿ ಮಂದಾರ ಮೂರ್ತಿಯು ಇದೀಗ ಸಾಲವನ್ನೂ ನೀಡದೇ ನಿರ್ವಹಣಾ ಶುಲ್ಕವೂ ಇಲ್ಲದೇ ನಾಪತ್ತೆಯಾಗಿದ್ದಾರೆ. 

ಸದ್ಯ ಮಂದಾರ ಮೂರ್ತಿ ವಿರುದ್ಧ ಯಶವಂತಪುರ ಪೊಲೀಸರಿಗೆ ಎಸ್​.ನಾರಾಯಣ್​ ದೂರು ನೀಡಿದ್ದಾರೆ. ಎಸ್​.ನಾರಾಯಣ್​ ದೂರಿನ ಹಿನ್ನೆಲೆ ಮಂದಾರ ಮೂರ್ತಿ ಸಹಚರರನ್ನು ಬಂಧಿಸಿದ್ದು, ಜ್ಯೋತಿಷಿಗಾಗಿ ಬಲೆ ಬೀಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಶ್ವದ ಅತೀ ಎತ್ತರದ ಪ್ರತಿಮೆಯಾದ ಏಕತಾ ಪ್ರತಿಮೆ ಕೆತ್ತಿದ ಶಿಲ್ಪಿ ರಾಮ್ ಸುತರ್ ಇನ್ನಿಲ್ಲ
ಗ್ಯಾರಂಟಿ ಹೆಸರಲ್ಲಿ ಲೂಟಿ, ಇದು ನುಂಗಣ್ಣಗಳ, ಲೂಟಿಕೋರರ ಸರ್ಕಾರ:ಆರ್ ಅಶೋಕ್ ತೀವ್ರ ವಾಗ್ದಾಳಿ