ವಿಷನ್‌ನಲ್ಲಿ ಸಿದ್ದರಾ‘ಮಾಯ! ತಪ್ಪು ಕನ್ನಡ ಬಿತ್ತರಿಸಿ ಸಮಾರಂಭದಲ್ಲಿ ಎಡವಟ್ಟು

Published : Mar 04, 2018, 08:36 AM ISTUpdated : Apr 11, 2018, 12:47 PM IST
ವಿಷನ್‌ನಲ್ಲಿ ಸಿದ್ದರಾ‘ಮಾಯ! ತಪ್ಪು ಕನ್ನಡ ಬಿತ್ತರಿಸಿ ಸಮಾರಂಭದಲ್ಲಿ ಎಡವಟ್ಟು

ಸಾರಾಂಶ

ಕನ್ನಡದ ಅನೇಕ ಶಬ್ದಗಳು ಅಪಭ್ರಂಶಗೊಂಡು ಪರದೆ ಮೇಲೆ ಹಾದು ಹೋದವು. ಕಾರ್ಯಕ್ರಮದ ಪ್ರಚಾರ, ಮುದ್ರಣ ಇತ್ಯಾದಿಗಳ ನಿರ್ವಹಣೆಯನ್ನು ಮುಂಬೈ ಮೂಲದ ಓಂ ಎಂಬುವರ ಮಾಲೀಕತ್ವದ ಫೇಸ್-1 ಎಂಬ ಸಂಸ್ಥೆಗೆ ನೀಡಲಾಗಿತ್ತು.

ಬೆಂಗಳೂರು(ಮಾ.04): ‘ನವ ಕರ್ನಾಟಕ ವಿಷನ್-2025‘ ಕಾರ್ಯಕ್ರಮದಲ್ಲಿ ಅಳವಡಿಸಿದ್ದ ಬೃಹತ್ ಪರದೆಯಲ್ಲಿ ಕನ್ನಡ ಶಬ್ದಗಳು ತಪ್ಪು ತಪ್ಪಾಗಿ ಬಿತ್ತರವಾದದ್ದು ಟೀಕೆಗೆ ಒಳಗಾಗಿದೆ. ವೇದಿಕೆ ಹಿಂಭಾಗದಲ್ಲಿ ಅಳವಡಿಸಿದ್ದ ಪರದೆಯಲ್ಲಿ ಕನ್ನಡದ ಹಲವು ಶಬ್ದಗಳ ಜೊತೆಗೆ ಮುಖ್ಯಮಂತ್ರಿ ಅವರ ಹೆಸರನ್ನು ‘ಸಿದ್ದರಾಮಾಯ’ ಎಂದು ಬಿಂಬಿಸಿತು.

ಕನ್ನಡದ ಅನೇಕ ಶಬ್ದಗಳು ಅಪಭ್ರಂಶಗೊಂಡು ಪರದೆ ಮೇಲೆ ಹಾದು ಹೋದವು. ಕಾರ್ಯಕ್ರಮದ ಪ್ರಚಾರ, ಮುದ್ರಣ ಇತ್ಯಾದಿಗಳ ನಿರ್ವಹಣೆಯನ್ನು ಮುಂಬೈ ಮೂಲದ ಓಂ ಎಂಬುವರ ಮಾಲೀಕತ್ವದ ಫೇಸ್-1 ಎಂಬ ಸಂಸ್ಥೆಗೆ ನೀಡಲಾಗಿತ್ತು. ತೆರೆಯ ಮೇಲೆ ಬೃಹತ್ ಗಾತ್ರದಲ್ಲಿ ವಿಷಯಗಳು ತಪ್ಪಾಗಿ ಕಾಣಿಸಿಕೊಳ್ಳುತ್ತಿದ್ದವು. ಕಾರ್ಯಕ್ರಮವನ್ನು ನಿರ್ವಹಿಸುತ್ತಿದ್ದ ಸಂಸ್ಥೆ ಇಂಗ್ಲಿಷ್‌ನಲ್ಲಿದ್ದ ವಿಷಯವನ್ನು ಗೂಗಲ್ ಭಾಷಾಂತರದ ಮೂಲಕ ಕನ್ನಡಕ್ಕೆ ಭಾಷಾಂತರಿಸಿದ್ದರಿಂದಲೋ ಅಥವಾ ತಪ್ಪಾಗಿ ಭಾಷಾಂತರ ಮಾಡಿದ್ದರಿಂದಲೋ ಅಕ್ಷರಗಳು ತಪ್ಪಾಗಿ ಮೂಡುತ್ತಿದ್ದವು. ಒತ್ತಕ್ಷರಗಳು, ದೀರ್ಘ ಸ್ವರಗಳು ಇರಲಿಲ್ಲ. ಮೂಲ ಸೌಕರ್ಯಗಳು ಬದಲಾಗಿ ‘ಮೂಲ ಸೌಕರಯಗಳು’, ಉದ್ಯೋಗದ ಬದಲು ‘ಉದಯಂಗ’, ಕೈಗಾರಿಕ-‘ಕಂೃಗಾರಿಕಾ’, ಅಭಿವೃದ್ಧಿ ಬದಲು ‘ಅಭಿವೃದಧಿ’ ಎಂಬುದಾಗಿ ಪ್ರದರ್ಶನವಾಯಿತು. ಕನ್ನಡೇತರರಿಗೆ ಈ ಗುತ್ತಿಗೆ ನೀಡಿರುವುದೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣ, ಇನ್ನು ಮುಂದಾದರೂ ಕನ್ನಡ ಬಲ್ಲ ಕಂಪನಿಗಳಿಗೆ ಇಂತಹ ಕಾರ‌್ಯಕ್ರಮ ನಿರ್ವಹಣೆ ಕೊಡುವುದು ಸೂಕ್ತವೆಂದು ಕನ್ನಡಪರ ಸಂಘಟನೆಗಳು ಒತ್ತಾಯಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ