ಕಂಬಳಕ್ಕೆ ಗ್ರೀನ್ ಸಿಗ್ನಲ್; ವಿಶೇಷ ವಿಧೇಯಕಕ್ಕೆ ರಾಷ್ಟ್ರಪತಿ ಅಸ್ತು

Published : Jul 03, 2017, 09:15 PM ISTUpdated : Apr 11, 2018, 12:36 PM IST
ಕಂಬಳಕ್ಕೆ ಗ್ರೀನ್ ಸಿಗ್ನಲ್; ವಿಶೇಷ ವಿಧೇಯಕಕ್ಕೆ ರಾಷ್ಟ್ರಪತಿ ಅಸ್ತು

ಸಾರಾಂಶ

ಕಳೆದ ವರ್ಷ ತಮಿಳುನಾಡಿನಾದ್ಯಂತ ತೀವ್ರ ಹೋರಾಟ ವ್ಯಕ್ತವಾದ ಬಳಿಕ ಜಲ್ಲಿಕಟ್ಟುಗೆ ಕಾನೂನು ಮಾನ್ಯತೆ ನೀಡಲಾಗಿತ್ತು. ಆ ಬಳಿಕ ಎಚ್ಚೆತ್ತುಕೊಂಡ ರಾಜ್ಯ ಸರಕಾರವು ಕಂಬಳದ ರಕ್ಷಣೆಗಾಗಿ ಒಮ್ಮತಾಭಿಪ್ರಾಯದಲ್ಲಿ ವಿಧಾನಮಂಡಲದಲ್ಲಿ ವಿಶೇಷ ವಿಧೇಯಕ ಮಾಡಿತು.

ನವದೆಹಲಿ(ಜುಲೈ 03): ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟುಗೆ ಹಸಿರುನಿಶಾನೆ ಸಿಕ್ಕಂತೆಯೇ ಕರ್ನಾಟಕ ಕರಾವಳಿಯ ವಿಶಿಷ್ಟ ಕ್ರೀಡೆ ಕಂಬಳಕ್ಕೂ ಗ್ರೀನ್ ಸಿಗ್ನಲ್ ಸಿಕ್ಕಿದೆ. ಕಂಬಳಕ್ಕೆ ಕಾನೂನು ಸಮ್ಮತಿ ತರುವ ವಿಶೇಷ ವಿಧೇಯಕಕ್ಕೆ ರಾಷ್ಟ್ರಪತಿಗಳು ಅಂಗೀಕಾರ ಹಾಕಿದ್ದಾರೆ. ಇದರೊಂದಿಗೆ, ಕಂಬಳ ಕ್ರೀಡೆಯು ಕಾನೂನುಬದ್ಧವಾಗಲಿದೆ.

ಜಲ್ಲಿಕಟ್ಟು, ಕಂಬಳ ಮೊದಲಾದ ಹಲವು ದೇಶೀಯ ಸಾಂಪ್ರದಾಯಿಕ ಕ್ರೀಡೆಗಳನ್ನು ಅಮಾನವೀಯತೆಯ ಕಾರಣವೊಡ್ಡಿ ಸುಪ್ರೀಂಕೋರ್ಟ್ ನಿಷೇಧ ಹೇರಿತ್ತು. ಆದರೆ, ಕಳೆದ ವರ್ಷ ತಮಿಳುನಾಡಿನಾದ್ಯಂತ ತೀವ್ರ ಹೋರಾಟ ವ್ಯಕ್ತವಾದ ಬಳಿಕ ಜಲ್ಲಿಕಟ್ಟುಗೆ ಕಾನೂನು ಮಾನ್ಯತೆ ನೀಡಲಾಗಿತ್ತು. ಆ ಬಳಿಕ ಎಚ್ಚೆತ್ತುಕೊಂಡ ರಾಜ್ಯ ಸರಕಾರವು ಕಂಬಳದ ರಕ್ಷಣೆಗಾಗಿ ವಿಧಾನಮಂಡಲದಲ್ಲಿ ವಿಶೇಷ ವಿಧೇಯಕ ಮಂಡಿಸಿತು. ಅದಕ್ಕೆ ವಿಧಾನಮಂಡಲ ಒಮ್ಮತದಿಂದ ಅನುಮೋದನೆ ಮಾಡಿತು. ಆನಂತರ, ಈ ಪ್ರಸ್ತಾವನೆಯನ್ನು ರಾಜ್ಯಪಾಲರಿಗೆ ಕಳುಹಿಸಲಾಯಿತು. ರಾಜ್ಯಪಾಲರು ಅದನ್ನು ರಾಷ್ಟ್ರಪತಿಗಳ ಅಂಗೀಕಾರಕ್ಕೆ ಕಳುಹಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್
ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ