
ಚೆನ್ನೈ: ಮದ್ಯಪಾನ ನಿಷೇಧದಿಂದ ಒಳ್ಳೆಯದಾಗುವುದಕ್ಕಿಂತ ಹೆಚ್ಚಾಗಿ ಕೆಟ್ಟದ್ದೇ ನಡೆಯುತ್ತದೆ ಎಂದು ನಟ, ರಾಜಕಾರಣಿ ಕಮಲ್ ಹಾಸನ್ ಹೇಳಿದ್ದಾರೆ.
‘ತಮಿಳುನಾಡಿನಲ್ಲಿ ಪೋಸ್ಟ್ ಆಫೀಸ್ಗಳಿಗಿಂತ ಸರ್ಕಾರಿ ಮದ್ಯದ ಅಂಗಡಿಗಳೇ ಹೆಚ್ಚಾಗಿವೆ. ಈ ವಾತಾವರಣವನ್ನು ನೀವು ಬದಲಿಸುವಿರಾ’ ಎಂಬ ಮಾಧ್ಯಮದವರ ಪ್ರಶ್ನೆಗೆ ಹಾಸನ್ ಹೀಗೆ ಉತ್ತರಿಸಿದ್ದಾರೆ.
ಮದ್ಯ ನಿಷೇಧದ ಬಗ್ಗೆ ತಮಿಳು ನಿಯತಕಾಲಿಕೆ ‘ಆನಂದ ವಿಕಟನ್’ನಲ್ಲಿ ಅಂಕಣ ಬರೆದಿರುವ ಕಮಲ್ ಹಾಸನ್ ‘ಮದ್ಯದ ನಿಷೇಧ ಮಾಫಿಯಾಗಳಿಗೆ ಕಾರಣವಾಗುತ್ತದೆ. ಅದು ಇತಿಹಾಸದಲ್ಲಿ ಸಾಬೀತಾಗಿದೆ. ಮದ್ಯ ಸೇವನೆ ಕ್ರಮೇಣ ನಿಯಂತ್ರಣಕ್ಕೆ ಬರಬೇಕು, ಹಠಾತ್ ಮದ್ಯಸೇವೆನೆಯನ್ನು ನಿಲ್ಲಿಸುವುದನ್ನು ಮನುಷ್ಯನ ದೇಹ ಒಗ್ಗಿಕೊಳ್ಳುವುದಿಲ್ಲ. ರಾಜಕೀಯ ಪಕ್ಷಗಳು ಮಹಿಳೆಯರ ಮತಕ್ಕಾಗಿ ಮದ್ಯನಿಷೇಧವನ್ನು ಕಾರ್ಡ್ ಆಗಿ ಉಪಯೋಗಿಸುತ್ತವೆಯಷ್ಟೆ’ ಎಂದಿದ್ದಾರೆ.
ಇದೇ ವೇಳೆ ಇತ್ತೀಚೆಗಷ್ಟೇ ಮಕ್ಕಳ್ ನೀದಿ ಮಯ್ಯಂ (ಎಂಎನ್ಎಂ) ಎಂಬ ಹೊಸ ಪಕ್ಷವನ್ನು ಸ್ಥಾಪಿಸಿರುವ ಹಾಸನ್ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವುದೇ ನಮ್ಮ ಮೊದಲ ಗುರಿ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.