
ಚೆನ್ನೈ: ತ್ರಿವರ್ಣ ಧ್ವಜದಲ್ಲೂ ಕೇಸರಿ ಇದೆ. ಆದರೆ ಅದು ಇಡೀ ಧ್ವಜವನ್ನು ವ್ಯಾಪಿಸಬಾರದು ಎಂದು ನಟ ಹಾಗೂ ಮಕ್ಕಳ ನೀದಿ ಮಯ್ಯಂ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಅಭಿಪ್ರಾಯಪಟ್ಟಿದ್ದಾರೆ.
ಈ ಮೂಲಕ ತಮ್ಮ ರಾಜಕೀಯ ನಿಲುವು ಏನು ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.
ತಮಿಳು ವಾರಪತ್ರಿಕೆ ‘ಆನಂದ ವಿಕಟಂ’ಗೆ ಅಂಕಣ ಬರೆದಿರುವ ಕಮಲ್, ‘ನನ್ನ ರಾಜಕೀಯವು ಜಾತಿ ಮತ್ತು ಧರ್ಮಗಳಿಂದ ಮುಕ್ತವಾಗಿದ್ದಾಗಿದೆ. ಹಾಗಂತ ನಾನು ಹಿಂದೂ ಧರ್ಮ ವಿರೋಧಿ ಅಲ್ಲ. ತ್ರಿವರ್ಣಧ್ವಜದಲ್ಲಿ ಕೇಸರಿಗೂ ಸ್ಥಾನಮಾನವಿದೆ’ ಎಂದು ಮಾರ್ಮಿಕವಾಗಿ ನುಡಿದರು.
‘ಆದರೆ ಕೇಸರಿಯೇ ಇಡೀ ಧ್ವಜ ವ್ಯಾಪಿಸಿದರೆ ಚೆನ್ನಾಗಿರದು. ಇತರರಿಗೂ ಸ್ಥಳಾವಕಾಶ ಮತ್ತು ಗೌರವ ನೀಡಬೇಕು. ಇದೇ ಶಪಥವನ್ನು ನಾವು ಮಾಡಿದ್ದೇವೆ. ಸಂವಿಧಾನದಲ್ಲೂ ಇದನ್ನೇ ಹೇಳಲಾಗಿದೆ’ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.