JDSಗೆ ಆರ್ಥಿಕ ಪೆಟ್ಟು, ಬೈ ಎಲೆಕ್ಷನ್‌ಗೆ ಜನರ ಸಹಕಾರ ಕೇಳಿದ ಗೌಡ್ರು

Published : Aug 24, 2019, 02:53 PM ISTUpdated : Aug 24, 2019, 03:01 PM IST
JDSಗೆ ಆರ್ಥಿಕ ಪೆಟ್ಟು, ಬೈ ಎಲೆಕ್ಷನ್‌ಗೆ ಜನರ ಸಹಕಾರ ಕೇಳಿದ ಗೌಡ್ರು

ಸಾರಾಂಶ

ಪ್ರಾದೇಶಿಕ ಪಕ್ಷದವಾದ ಜೆಡಿಎಸ್‌ಗೆ ಆರ್ಥಿಕ ಪೆಟ್ಟು ಬಿದ್ದಿದ್ದು,  ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರು ಮುಂದಿನ ಉಪಚುನಾವಣೆಗೆ ಜನರ ಸಹಕಾರ ಕೋರಿದ್ದಾರೆ.  

ಹಾಸನ, (ಆ.24): ಅನರ್ಹ ಶಾಸಕರಾಗಲು ಯಾರು ಕಾರಣ? ಬಿಜೆಪಿಯವರು ರಾಜೀನಾಮೆ ಕೊಡಿಸಿದ್ದಾರೆ ಅವರೇ ಕಾಪಾಡಬೇಕು. ಉಪಚುನಾಣೆಯಲ್ಲಿ ಹೋರಾಟ ಮಾಡುತ್ತೇನೆ.  ಕಳೆದ ಚುನಾವಣೆಯಲ್ಲಿ ಆರ್ಥಿಕ ಪೆಟ್ಟು ಬಿದ್ದಿದ್ದು, ಮುಂದಿನ ಚುನಾವಣೆಯಲ್ಲಿ ಜನರು ಸಹಕಾರ ಮಾಡುತ್ತಾರೆ ಎಂದು ಹೇಳಿದರು.

ಇಂದು (ಶನಿವಾರ) ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೌಡ್ರು, ನಿಖಿಲ್ ಕುಮಾರ್ ಸೋತಿದ್ದಾರೆ. ನಾನು ಸೋತಿದ್ದೇನೆ. ಆದರೆ ಕುಳಿತಿದ್ದೇವಾ? ಅಧಿಕಾರದ ಕಡೆ ಹೋಗಿದ್ದೇವಾ? ಜನರ ಬಳಿಯೇ ಇದ್ದೇವೆ ಎಂದರು.

ಸರ್ಕಾರ ಬೀಳಿಸುವಲ್ಲಿ ಸ್ಪೀಕರ್ ಪಾತ್ರ? Exclusive ಸಂದರ್ಶನದಲ್ಲಿ ದೇವೇಗೌಡ್ರಿಂದ ಸ್ಫೋಟಕ ಮಾಹಿತಿ

ಸಿದ್ದರಾಮಯ್ಯ ಹೇಳಿಕೆಗೆ ಇವತ್ತು ಪ್ರತಿಕ್ರಿಯೆ ನೀಡಲ್ಲ. ಇನ್ನೂ ನೆನಪಿನ ಶಕ್ತಿ ಇದೆ, ನೋಡೋಣ ಜನರ ಮುಂದೆ ಹೋಗೋಣ. ಸಿದ್ದರಾಮಯ್ಯ ಹೇಳಿಕೆಯನ್ನು ಜನತೆ ನಂಬಬೇಕಲ್ಲ. ಎಲ್ಲವನ್ನು ಸಮಯ ಬಂದಾಗ ಹೇಳುವೆ. ದೇವೇಗೌಡರನ್ನು ಮುಗಿಸಲು ಬಂದವರೆಲ್ಲಾ ಮುಗಿದು ಹೋಗಿದ್ದಾರೆ ನಾನು ದೇವರ ನಂಬಿದ್ದೇನೆ ಆದ್ದರಿಂದಲೇ ಹೋರಾಟ ಮಾಡುತ್ತಿದ್ದೇನೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟರು.

ಪಕ್ಷ ಕಟ್ಟಿ ನಡೆಸುತ್ತೇನೆ ಆ ಶಕ್ತಿ ನನಗಿದೆ. ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಹೊಸ ಜವಬ್ದಾರಿ ತೆಗೆದುಕೊಂಡಿದ್ದು,  ಎಲ್ಲ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಿಕೊಂಡು ಹೋಗೋಣ ಅಂದಿದ್ದಾರೆ ಎಂದು ಹೇಳುವ ಮೂಲಕ ಮತ್ತೆ ಮೆತ್ರಿ ಮುಂದುವರಿಸುವ ಇಂಗಿತ ವ್ಯಕ್ತಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ