ಕುಮಾರಸ್ವಾಮಿ ಮೇಲೆ ಆಪ್ತರ ಮುನಿಸು: ಜೆಡಿಎಸ್ ಪೀಸ್ ಪೀಸ್..?

Published : Aug 29, 2019, 08:10 PM ISTUpdated : Aug 29, 2019, 08:13 PM IST
ಕುಮಾರಸ್ವಾಮಿ  ಮೇಲೆ ಆಪ್ತರ ಮುನಿಸು: ಜೆಡಿಎಸ್ ಪೀಸ್ ಪೀಸ್..?

ಸಾರಾಂಶ

ಪೋನ್ ಕದ್ದಾಲಿಕೆ ಪ್ರಕರಣದಿಂದ ಜೆಡಿಎಸ್ ನಾಯಕರ ಮಧ್ಯೆ ಬಿಕ್ಕಟ್ಟು| ನಾಯಕರ ಮಧ್ಯೆಯೇ ಸಂಬಂಧ ಹಳಸಲು ಕಾರಣವಾಗುತ್ತಿದೆ ಪೋನ್ ಕದ್ದಾಲಿಕೆ| ಮಾಜಿ ಸಿಎಂ ಕುಮಾರಸ್ವಾಮಿಯಿಂದ ದೂರವಾಗುತ್ತಿದ್ದಾರೆ ಆಪ್ತ ನಾಯಕರು.

ಬೆಂಗಳೂರು, [ಆ.29]: ಪೋನ್ ಟ್ಯಾಪಿಂಗ್ ಹಗರಣ ಜೆಡಿಎಸ್ ನಲ್ಲಿ ಬಿರುಕು ಕಾಣಿಸಿಕೊಂಡಿದೆ. ಮೈತ್ರಿ ಸರ್ಕಾರವಿದ್ದಾಗ ಕೇವಲ ಬಿಜೆಪಿ, ಕಾಂಗ್ರೆಸ್ ಮತ್ರವಲ್ಲದೇ ಕುಮಾರಸ್ವಾಮಿ ತಮ್ಮ ಆಪ್ತ ನಾಯಕರಾದ ಮೇಲುಕೋಟೆ ಶಾಸಕ ಸಿ.ಎಸ್. ಪುಟ್ಟರಾಜು ಹಾಗೂ ಜಿ.ಟಿ.ದೇವೇಗೌಡ ಸೇರಿದಂತೆ ಇನ್ನು ಕೆಲ ನಾಯಕರ ಫೋನ್ ಗಳನ್ನು ಸಹ ಟ್ಯಾಪಿಂಗ್ ಮಾಡಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇದರಿಂದ ಕುಮಾರಸ್ವಾಮಿ ಮೇಲೆ ಆಪ್ತರು ಮುನಿಸಿಕೊಂಡಿದ್ದು, ಜೆಡಿಎಸ್ ನಲ್ಲೂ  ಭಿನ್ನಮತ ಭುಗಿಲೇಳುತ್ತಿದೆ. ಸಾಲದಕ್ಕೆ ಬಿಜೆಪಿ ಮನೆಗೆ ಹತ್ತಿರವಾಗುತ್ತಿದ್ದಾರೆ. ನಮ್ಮ ಫೋನ್ ಟ್ಯಾಪ್ ಮಾಡುವಂತದ್ದೇನಿತ್ತು..? ಯಾಕೆ ನಮ್ಮ ಮೇಲೆ ಅನುಮಾನ.?  ನಾವು ಇಷ್ಟು ನಿಷ್ಠೆ ತೋರಿದ್ರೂ ಇವರಿಗ್ಯಾಕೆ ಡೌಟ್.? ಎಂದು ಪುಟ್ಟರಾಜು ತಮ್ಮ ಬೆಂಬಲಿಗರ ಬಳಿ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.

ಬಿಜೆಪಿ ಸೇರುವ ಸೂಚನೆ ಕೊಟ್ಟ ಅನರ್ಹ JDS ಶಾಸಕ

ಕುಮಾರಸ್ವಾಮಿಯಿಂದ ಅಂತರ ಕಾಯ್ದುಕೊಂಡ ಆಪ್ತರು
ಮೈತ್ರಿ ಸರ್ಕಾರ ಪತನಗೊಂಡಿದ್ದೇ ತಡ ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರು ಕುಮಾರಸ್ವಾಮಿ ಹಾಗೂ ದೇವೇಗೌಡ್ರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿ ರಾಜಕೀಯಕ್ಕೆ ಗುಡ್ ಬೈ ಹೇಳಿದ್ದರು.

 ಇದೀಗ ಪುಟ್ಟರಾಜು ಸಹ ಕುಮಾರಸ್ವಾಮಿಯಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಇದರಕ್ಕೆ ಪೂರಕವೆಂಬಂತೆ  ಎಚ್ ಡಿಕೆ ಜತೆ ವಿದೇಶ ಪ್ರವೇಶಕ್ಕೆ ತೆರಳಲು ನಿರಾಕರಿಸಿ, ಸಿಎಂ ಯಡಿಯೂರಪ್ಪ ಅವರ ಕಾರ್ಯಕ್ರದಲ್ಲಿ ಭಾಗಿಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.   
 
ಗುರುವಾರ ಸಿಎಂ ಯಡಿಯೂರಪ್ಪ  ಮಂಡ್ಯಕ್ಕೆ ತೆರಳಿ KRS ಜಲಾಶಯಕ್ಕೆ ಬಾಗಿನ ಅರ್ಪಿಸಿದರು. ಈ ವೇಳೆ, ಸುಮಲತಾ ಸೇರಿದಂತೆ  ಮಂಡ್ಯದ ಜೆಡಿಎಸ್ ನಾಯಕರನ್ನು ಸಹ ಕಾರ್ಯಕ್ರಮಕ್ಕೆ ಆಗಮಿಸುವಂತೆ ಆಹ್ವಾನ ನೀಡಿದ್ದರು. ಹಾಗೆಯೇ  ಜೆಡಿಎಸ್ ಶಾಸಕ ಪುಟ್ಟರಾಜು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 

ಇನ್ನು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಯಡಿಯೂರಪ್ಪ ಅವರನ್ನು ಜೆಡಿಎಸ್ ಶಾಸಕ  ಜಿ.ಟಿ. ದೇವೇಗೌಡ ಹಾರ ಹಾಕು ಮೂಲಕ ಸ್ವಾಗತಿಸಿದರು. ಈ ವೇಳೆ ಮಾತನಾಡಿದ ಅವರು ಯಡಿಯೂರಪ್ಪ ಸಿಎಂ ಆದ್ಮೇಲೆ ಮಳೆ ಚೆನ್ನಾಗಿ ಆಗಿದೆ, ಬರ ಎಲ್ಲ ಹೋಗಿ ನದಿ ಕೆರೆ ಕಟ್ಟೆಗಳೆಲ್ಲಾ ತುಂಬಿವೆ ಎಂದು ಬಿಎಸ್ ವೈ ಅವರನ್ನು ಗುಣಗಾನ ಮಾಡಿದರು.

ಇದನ್ನೇ ಟ್ರಂಪ್ ಕಾರ್ಡ್ ಮಾಡಿಕೊಂಡಿರುವ ಬಿಜೆಪಿ, ಮಂಡ್ಯದಲ್ಲಿ ತಮ್ಮ ಪ್ರಾಬಲ್ಯ ಸಾಧಿಸಲು ಸ್ಮೂತ್ ಆಗಿಯೇ ಜೆಡಿಎಸ್ ನಾಯಕರನ್ನು ಹತ್ತಿರು ಕರೆದುಕೊಳ್ಳಿತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಇಂದಿನ ಕಾರ್ಯಕ್ರಮಕ್ಕೆ ಖುದ್ದು ಸಿಎಂ ಅವರೇ ಪುಟ್ಟರಾಜು ಸೇರಿದಂತೆ ಜೆಡಿಎಸ್ ನಾಯಕರಿಗೆ ಆಹ್ವಾನ ನೀಡಿರುವುದು ರಾಜ್ಯ ರಾಜಕಾರದಲ್ಲಿ ಸಂಚಲನ ಮೂಡಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆಸೀಸ್‌ನಲ್ಲಿ ಮಕ್ಕಳಿಗೆ ಜಾಲತಾಣ ಬಳಕೆ ನಿಷೇಧ : ನಾಳೆಯಿಂದ ಜಾರಿ
ನಿಮ್ಮ ಪತ್ನಿ ಭಾರತಕ್ಕೆ ಕಳಿಸಿ : ವ್ಯಾನ್ಸ್‌ಗೆ ವಲಸಿಗರ ಟಾಂಗ್‌