
ಚೆನ್ನೈ(ನ.13): ಸುಮಾರು 50 ದಿನಗಳ ನಂತರ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅಪೊಲೊ ಆಸ್ಪತ್ರೆಯಿಂದ ಮಾತನಾಡಿದ್ದಾರೆ. ತಮಿಳುನಾಡು, ಇತರ ರಾಜ್ಯ ಹಾಗೂ ವಿಶ್ವದ ಜನತೆಯ ನಿರಂತರ ಪ್ರಾರ್ಥನೆಯ ಪರಿಣಾಮ ನಾನು ಪುನರ್ಜನ್ಮ ಪಡೆದಿದ್ದಾನೆ. ನಾನು ಚೇತರಿಸಿಕೊಳ್ಳುವ ಖುಷಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಸಂತಸವಾಗುತ್ತದೆ' ಎಂದು ಜಯಲಲಿತಾ ಆಸ್ಪತ್ರೆಯಿಂದ ಸ್ವತಃ ಪತ್ರ ಮುಖೇನ ತಿಳಿಸಿದ್ದಾರೆ.
ಒಟ್ಟು 2 ಪುಟ ಬರೆದಿರುವುದನ್ನು ಎಡಿಎಂಕೆ ಪಕ್ಷದ ಮುಖ್ಯ ಕಚೇರಿಯಲ್ಲಿ ಬಿಡುಗಡೆ ಮಾಡಿ ಈ ವಿಷಯ ತಿಳಿಸಲಾಯಿತು. ಪರಿಪೂರ್ಣವಾಗಿ ಗುಣವಾಗಿ ನಿಮ್ಮ ಸೇವೆಗೆ ಶೀಘ್ರದಲ್ಲಿ ತೊಡಗಿಸಿಕೊಳ್ಳುತ್ತೇನೆ. ನಾನು ಆಸ್ಪತ್ರೆ ಸೇರಿದಾಗ ಕೆಲವು ಕಾರ್ಯಕರ್ತರು ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ನನಗೆ ದುಃಖವಾಗಿದೆ. ಪಕ್ಷದ ಭವಿಷ್ಯ ಹಾಗೂ ಅಭಿವೃದ್ದಿಗಾಗಿ ಕಾರ್ಯಕರ್ತರು ನನಗೆ ಬಹಳ ಮುಖ್ಯ' ಎಂದು ತಿಳಿಸಿದ್ದಾರೆ.
ಅನಾರೋಗ್ಯದ ಕಾರಣದಿಂದಾಗಿ ಮುಖ್ಯಮಂತ್ರಿ ಜಯಲಲಿತಾ ಅವರು ಚೆನ್ನೈ'ನ ಅಪೊಲೊ ಆಸ್ಪತ್ರೆಯಲ್ಲಿ ಸೆ.22 ರಂದು ದಾಖಲಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.