ಸಾಂಬಾ ಬೆಳೆಗೆ ಮೆಟ್ಟೂರು ಡ್ಯಾಂನಿಂದ ನೀರು ಬಿಡಲು ಜಯಲಲಿತಾ ಆದೇಶ

Published : Sep 16, 2016, 10:23 AM ISTUpdated : Apr 11, 2018, 01:09 PM IST
ಸಾಂಬಾ ಬೆಳೆಗೆ ಮೆಟ್ಟೂರು ಡ್ಯಾಂನಿಂದ ನೀರು ಬಿಡಲು ಜಯಲಲಿತಾ ಆದೇಶ

ಸಾರಾಂಶ

ಚೆನ್ನೈ (ಸೆ.16): ಕಾವೇರಿ ನದಿಯಿಂದ ಬಿಡುಗಡೆಯಾಗುವ ನೀರು ಮೆಟ್ಟೂರು ಅಣೆಕಟ್ಟು ಸೇರಲಿದ್ದು ಸಾಂಬಾ ಬೆಳೆಗೆ ನೀರಾವರಿ ಒದಗಿಸಲು ಮೆಟ್ಟೂರು ಡ್ಯಾಂ ನೀರನ್ನು ಬಿಡುವಂತೆ ಸಿಎಂ ಜಯಲಲಿತಾ ಆದೇಶಿಸಿದ್ದಾರೆ.

ಸೆ.20 ರಿಂದ ಮೆಟ್ಟೂರು ಅಣೆಕಟ್ಟಿನಿಂದ ನೀರು ಬಿಡುವಂತೆ ಸೂಚಿಸಿದ್ದೇನೆ. ರೈತರು ಸಾಂಬಾ ಕೃಷಿಗಾಗಿ ನೀರನ್ನು ಬಳಸಿಕೊಳ್ಳಬಹುದು ಎಂದು ಜಯಲಲಿತಾ ಹೇಳಿದ್ದಾರೆ.

ಮೆಟ್ಟೂರು ಅಣೆಕಟ್ಟಿನಲ್ಲಿ ನೀರಿನ ಮಟ್ಟ 84.76 ಅಡಿಗಳಷ್ಟಿದ್ದು, ಸುಪ್ರೀಂ ಆದೇಶದಂತೆ ಕಾವೇರಿ ನೀರನ್ನು ಬಿಡಲಿದ್ದು ನೀರಿನ ಮಟ್ಟ ಹೆಚ್ಚಾಗಲಿದೆ. ನೈರುತ್ಯ ಮುಂಗಾರು ಸಮಯದಲ್ಲಿ ಇನ್ನಷ್ಟು ನೀರು ಬಿಡಲಿರುವುದನ್ನು ಗಮನದಲ್ಲಿಟ್ಟಿಕೊಂಡು ಮೆಟ್ಟೂರು ಡ್ಯಾಂನಿಂದ ನೀರನ್ನು ಬಿಡಲು ಆದೇಶಿಸಲಾಗಿದೆ ಎಂದು ಜಯಲಲಿತಾ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

10 ದಿನ ನಡೆದ ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ತೆರೆ
ಗ್ಯಾರಂಟಿಯಿಂದಾಗಿ ತಲಾ ಆದಾಯದಲ್ಲಿ ರಾಜ್ಯ ನಂ.1 : ಸಿದ್ದರಾಮಯ್ಯ