ವಿಜಯಪುರ ಮೌಲ್ವಿ ಬಂಧನಕ್ಕೆ ಜಾವೇದ್ ಅಖ್ತರ್ ಆಗ್ರಹ..!

Published : Jun 20, 2018, 06:50 PM IST
ವಿಜಯಪುರ ಮೌಲ್ವಿ ಬಂಧನಕ್ಕೆ ಜಾವೇದ್ ಅಖ್ತರ್ ಆಗ್ರಹ..!

ಸಾರಾಂಶ

ಮೌಲ್ವಿ ತನ್ವೀರ್ ಪೀರಾ ಹಾಶಿಮ್ ಬಂಧನಕ್ಕೆ ಆಗ್ರಹ ಗೋಹತ್ಯೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಮೌಲ್ವಿ ಹಾಶಿಮ್ ಬಂಧನಕ್ಕೆ ಜಾವೇದ್ ಅಖ್ತರ್ ಒತ್ತಾಯ ವಿಜಯಪುರದ ಮೌಲ್ವಿ ತನ್ವೀರ್ ಪೀರಾ ಹಾಶಿಮ್ 

ಬೆಂಗಳೂರು(ಜೂ.20): ರಂಜಾನ್ ಹಬ್ಬದಂದು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದ ವಿಜಯಪುರದ ಮೌಲ್ವಿ ತನ್ವೀರ್ ಪೀರಾ ಹಾಶಿಮ್ ಅವರನ್ನು ತಕ್ಷಣವೇ ಬಂಧಿಸಬೇಕು ಎಂದು ಖ್ಯಾತ ಉರ್ದು ಕವಿ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಜಾವೇದ್ ಅಖ್ತರ್ ಆಗ್ರಹಿಸಿದ್ದಾರೆ. ಬಕ್ರೀದ್ ವೇಳೆ ಗೋವುಗಳನ್ನು ಕೊಲ್ಲುತ್ತೇವೆ ಎಂಬ ಮೌಲ್ವಿ ಹೇಳಿಕೆ ಬೇಜವಾಬ್ದಾರಿತನದ್ದು ಮತ್ತು ಅತಿರೇಕದ್ದು ಎಂದು ಅಖ್ತರ್ ಹೇಳಿದ್ದಾರೆ.

ಜಾತ್ಯತೀತತೆ ಎಂದರೆ ಅಲ್ಪಸಂಖ್ಯಾತ ಕೋಮುವಾದವನ್ನು ಕಡೆಗಣಿಸುವುದು ಅಥವಾ ಸಹಿಸಿಕೊಳ್ಳುವುದು ಎಂದರ್ಥವಲ್ಲ ಎಂದಿರುವ ಅವರು, ಈ ಬೇಜವಾಬ್ದಾರಿಯುತ ಮತ್ತು ಅತಿರೇಕದ ಹೇಳಿಕೆ ನೀಡಿದ ಮೌಲ್ವಿ ತನ್ವೀರ್ ಹಾಶಿಮ್ ನನ್ನು ತಕ್ಷಣವೇ ಬಂಧಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಜೂನ್ 16ರಂದು ವಿಜಯಪುರದಲ್ಲಿ ನಡೆದ ರಂಜಾನ್ ಆಚರಣೆಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೌಲ್ವಿ, ಮುಂದಿನ ತಿಂಗಳುಗಳಲ್ಲಿ ಬಕ್ರೀದ್ ಬರುತ್ತದೆ ಆಗ ನಾವು ಗೋವುಗಳನ್ನು ಕೊಲ್ಲುತ್ತೇವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ