ಜಂತಕಲ್ ಮೈನಿಂಗ್ ಹಗರಣಕ್ಕೆ ಹೊಸ ಟ್ವಿಸ್ಟ್; ಬಂಧನದ ಭೀತಿಯಲ್ಲಿ ಗಂಗಾರಾಮ್ ಪುತ್ರ

Published : Jun 21, 2017, 06:40 PM ISTUpdated : Apr 11, 2018, 01:08 PM IST
ಜಂತಕಲ್ ಮೈನಿಂಗ್ ಹಗರಣಕ್ಕೆ ಹೊಸ ಟ್ವಿಸ್ಟ್; ಬಂಧನದ ಭೀತಿಯಲ್ಲಿ ಗಂಗಾರಾಮ್ ಪುತ್ರ

ಸಾರಾಂಶ

ಜಂತಕಲ್ ಮೈನಿಂಗ್ ಹಗರಣಕ್ಕೆ ಹೊಸ ಟ್ವಿಸ್ಟ್​ ಸಿಕ್ಕಿದೆ. ಜಂತಕಲ್ ಗಣಿ ಕಂಪನಿ ಮಾಲೀಕ ವಿನೋದ್ ಗೋಯಾಲ್ ವಿಚಾರಣೆ ವೇಳೆ ಹಲವು ಸ್ಫೋಟಕ ಅಂಶಗಳನ್ನು ಬಾಯ್ಬಿಟ್ಟಿದ್ದಾರೆ.

ಬೆಂಗಳೂರು (ಜೂ.21): ಜಂತಕಲ್ ಮೈನಿಂಗ್ ಹಗರಣಕ್ಕೆ ಹೊಸ ಟ್ವಿಸ್ಟ್​ ಸಿಕ್ಕಿದೆ. ಜಂತಕಲ್ ಗಣಿ ಕಂಪನಿ ಮಾಲೀಕ ವಿನೋದ್ ಗೋಯಾಲ್ ವಿಚಾರಣೆ ವೇಳೆ ಹಲವು ಸ್ಫೋಟಕ ಅಂಶಗಳನ್ನು ಬಾಯ್ಬಿಟ್ಟಿದ್ದಾರೆ.

ಗಂಗಾರಾಮ್ ಬಡೇರಿಯಾ , ಪುತ್ರ ಗಗನ್ ಬಡೇರಿಯಾ ಮ್ಯೂಸಿಕಲ್ ಕರಿಯರ್​ಗಾಗಿ ಲಂಚದ ಬೇಡಿಕೆ ಇಟ್ಟಿದ್ದ . 2007ರಲ್ಲಿ ಗಂಗರಾಮ್ ಬಡೇರಿಯಾ ಚೆಕ್ ಮೂಲಕ ಎರಡು ಬಾರಿ 20 ಲಕ್ಷ ರೂ ಲಂಚ ಪಡೆದಿದ್ದ. ರಿಚ್​ಮಂಡ್ ಟೌನ್ ಮತ್ತು ಹೆಚ್ಎಸ್ಆರ್ ಲೇಔಟ್ ಬ್ಯಾಂಕ್​ಗೆ ಕ್ರೆಡಿಟ್ ಮಾಡಲಾಗಿತ್ತು. ಗಗನ್ ಬಡೇರಿಯಾ ತನ್ನ ತಂದೆಯಿಂದ ಹಣ ಪಡೆದು ತನ್ನ ಅಕೌಂಟ್​ಗೆ ಹಾಕಿಕೊಂಡಿದ್ದ. ಸದ್ಯ ಗಂಗರಾಮ್ ಬಡೇರಿಯಾ ಪುತ್ರನಿಗೆ ಬಂಧನದ ಭೀತಿ ಶುರುವಾಗಿದೆ.

ನಿರೀಕ್ಷಣಾ ಜಾಮೀನಿಗಾಗಿ ಗಗನ್ ಬಡೇರಿಯಾ ಅರ್ಜಿ ಸಲ್ಲಿಸಿದ್ದಾನೆ. ಗನನ್ ಬಂಡೇರಿಯಾಗೆ ಜಾಮೀನು ನೀಡದಂತೆ ಎಸ್ಐಟಿ ಆಕ್ಷೇಪಣೆ ಸಲ್ಲಿಸಿದೆ. ಪ್ರತ್ಯಕ್ಷವಾಗಿ ಅಪ್ಪನ ಭ್ರಷ್ಟಚಾರದಲ್ಲಿ ಮಗ ಭಾಗಿಯಾದ ಆರೋಪ ಹಿನ್ನೆಲೆಯಲ್ಲಿ ಗಗನ್ ಬಡೇರಿಯಾಗೆ ಬಂಧನದ ಭೀತಿ ಶುರುವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪಿಯುಸಿ ಸರ್ಟಿಫಿಕೇಟ್ ಇದ್ದರೆ ಮಾತ್ರ ವಾಹನಕ್ಕೆ ಪೆಟ್ರೋಲ್ -ಡೀಸೆಲ್, ಡಿ.18ರಿಂದ ಹೊಸ ನಿಯಮ
ಕಿಡ್ನಾಪ್ ಮಾಡಿದವರ ಸ್ಮಾರ್ಟ್‌ವಾಚ್ ಬಳಸಿ ಬಚಾವ್ ಆದ ಹೊಟೆಲ್ ಮ್ಯಾನೇಜರ್, ಕೈಹಿಡಿದ SOS