ಜನತಾದಳದಿಂದ ಬಂದಿರುವ ಇಬ್ರಾಹಿಂ, ಸಿದ್ದರಾಮಯ್ಯರಿಂದ ಪಕ್ಷ ಬೆಳೆಸಲು ಯಾವ ಕೊಡುಗೆಯೂ ಇಲ್ಲ - ಜನಾರ್ದನ ಪೂಜಾರಿ

Published : Oct 22, 2016, 04:38 AM ISTUpdated : Apr 11, 2018, 12:49 PM IST
ಜನತಾದಳದಿಂದ ಬಂದಿರುವ ಇಬ್ರಾಹಿಂ, ಸಿದ್ದರಾಮಯ್ಯರಿಂದ ಪಕ್ಷ ಬೆಳೆಸಲು ಯಾವ ಕೊಡುಗೆಯೂ ಇಲ್ಲ - ಜನಾರ್ದನ ಪೂಜಾರಿ

ಸಾರಾಂಶ

ಇಬ್ರಾಹಿಂ ಮತ್ತು ಸಿದ್ದರಾಮಯ್ಯ ಜನತಾದಳದಿಂದ ಬಂದವರು. ಇವರಿಂದ ಪಕ್ಷ ಬೆಳೆಸಲು ಯಾವ ಕೊಡುಗೆಯೂ ಇಲ್ಲ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನೈತಿಕವಾಗಿ ಸಿಎಂ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಹೇಳಿದರು. ಸಮಾನ ನಾಗರಿಕ ಸಂಹಿತೆ ಮತ್ತು ತಲಾಖೆ ವಿಷಯದಲ್ಲಿ ಮಾತನಾಡಿದ ಅವರು, ಮುಸ್ಲಿಮರ ತಲಾಖ್ ಅವರ ಧರ್ಮಕ್ಕೆ ಬಿಟ್ಟದ್ದು. ಸಮುದಾಯದ ಮಹಿಳೆಯರು ಈ ಬಗ್ಗೆ ಮಾತನಾಡಲಿ. ಮಹಿಳೆಯರೇ ತಮ್ಮ ಗಂಡಂದಿರಿಗೆ ತಲಾಖ್ ನೀಡಲಿ ಎಂದು ಉತ್ತರಿಸಿದರು.

ಮಂಗಳೂರು(ಅ.22): ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಮಾಜಿ ಪ್ರಧಾನಿ ದೇವೇಗೌಡರು ಸಂಚು ರೂಪಿಸುತ್ತಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇವೇಗೌಡರ ಆಡಳಿತ ಮಾದರಿ, ಅವರು ಹೃದಯವಂತರು ಎಂದು ಇಬ್ರಾಹಿಂ ಹಾಡಿ ಹೊಗಳಿದ್ದನ್ನ ಉಲ್ಲೇಖಿಸಿದ ಪೂಜಾರಿ, ಸಿ.ಎಂ. ಇಬ್ರಾಹಿಂ ಅವರ ಮಾತುಗಳೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿ. ಸಿ ಎಂ ಸಿದ್ದರಾಮಯ್ಯ ಅವರು ಈ ಸಂಚಿಗೆ ಬಲಿ ಬೀಳಬಾರದು, ತಕ್ಷಣ ಇಬ್ರಾಹಿಂ ಅವರನ್ನು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಬೇಕು, ಪಕ್ಷದಿಂದಲೂ ಅವರನ್ನು ತೆಗೆಯಬೇಕು ಎಂದು ಒತ್ತಾಯಿಸಿದ್ದಾರೆ.

ಇಬ್ರಾಹಿಂ ಮತ್ತು ಸಿದ್ದರಾಮಯ್ಯ ಜನತಾದಳದಿಂದ ಬಂದವರು. ಇವರಿಂದ ಪಕ್ಷ ಬೆಳೆಸಲು ಯಾವ ಕೊಡುಗೆಯೂ ಇಲ್ಲ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನೈತಿಕವಾಗಿ ಸಿಎಂ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಹೇಳಿದರು. ಸಮಾನ ನಾಗರಿಕ ಸಂಹಿತೆ ಮತ್ತು ತಲಾಖೆ ವಿಷಯದಲ್ಲಿ ಮಾತನಾಡಿದ ಅವರು, ಮುಸ್ಲಿಮರ ತಲಾಖ್ ಅವರ ಧರ್ಮಕ್ಕೆ ಬಿಟ್ಟದ್ದು. ಸಮುದಾಯದ ಮಹಿಳೆಯರು ಈ ಬಗ್ಗೆ ಮಾತನಾಡಲಿ. ಮಹಿಳೆಯರೇ ತಮ್ಮ ಗಂಡಂದಿರಿಗೆ ತಲಾಖ್ ನೀಡಲಿ ಎಂದು ಉತ್ತರಿಸಿದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಗತ್ತಿನಲ್ಲಿ ಅತಿಹೆಚ್ಚು ಮದ್ಯಪಾನ ಮಾಡುವ ದೇಶ ಯಾವುದು? ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?
ಸಿಎಂ ಹೇಳಿದ ಮೇಲೂ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ