
ಬೆಂಗಳೂರು(ನ.15): ಹಳೆ 500, 1000 ರೂ. ನೋಟು ಚಲಾವಣೆ ರದ್ದು ಹಿನ್ನೆಲೆ ಬ್ಯಾಂಕ್ ಖಾತೆ ಹೊಂದಿರುವವರು ಎಚ್ಚರಿಕೆಯಿಂದ ಇರಬೇಕು ಅದರಲ್ಲಿಯೂ ಜನ್ಧನ್ನಲ್ಲಿ ಖಾತೆ ಇರುವವರು ಮತ್ತಷ್ಟು ಎಚ್ಚರಿಕೆಯಿಂದ ಇರಬೇಕು. \
ಬೇರೆಯವರ ಹಣವನ್ನು ನಿಮ್ಮ ಖಾತೆಯಲ್ಲಿ ಚಲಾವಣೆ ಬೇಡ, ನಿಮ್ಮ ಖಾತೆಯಲ್ಲಿ ಚಲಾವಣೆ ಮಾಡಿ ತೊಂದರೆಗೆ ಸಿಲುಕಬೇಡಿ ಇದರಿಂದ ಕಡುಬಡವರಿಗೆ ಕೊಟ್ಟಿರುವ ಯೋಜನೆಗಳು ರದ್ದಾಗಬಹುದು, ನಿಮಗೆ ಕೊಡುತ್ತಿರುವ ಯೋಜನೆಗಳು ಕೈ ತಪ್ಪಬಹುದು ಎಂದು ವಿಕಾಸಸೌಧದಲ್ಲಿ ಸಚಿವ ಯು.ಟಿ. ಖಾದರ್ ಹೇಳಿಕೆ ನೀಡಿದ್ದಾರೆ.
ನಿಮ್ಮ ಬಳಿ ಹೆಚ್ಚು ಹಣ ಇದ್ದರೆ ನಿಮಗೆ ಬರುವ ಯೋಜನೆ ರದ್ದಾಗುತ್ತೆ, ಹೀಗಾಗಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಇಲ್ಲವಾದರೆ ಮುಂದೆ ಸರಕಾರಿ ಸೌಲಭ್ಯಗಳು ನಿಮಗೆ ದೊರೆಯದಾಗುತ್ತವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.