
ಬೆಂಗಳೂರು (ಜೂ. 12): ಕಿಡ್ನಿ ಕಸಿ ಮಾಡಿಸಿಕೊಂಡಿರುವ ಅರುಣ್ ಜೇಟ್ಲಿ ಆಸ್ಪತ್ರೆಯಿಂದ ಮನೆಗೆ ವಾಪಸ್ ಆಗಿದ್ದು, ಸೋಂಕು ತಗಲುವ ಭೀತಿಯಿಂದ ವೈದ್ಯರು ಯಾರನ್ನು ಕೂಡ ಭೇಟಿಯಾಗಲು ಬಿಡುತ್ತಿಲ್ಲ.
ಜೇಟ್ಲಿ ಆಸ್ಪತ್ರೆ ಸೇರಿದ್ದರಿಂದ ಹಣಕಾಸು ಇಲಾಖೆ ಪ್ರಭಾರವನ್ನು ತಾತ್ಕಾಲಿಕವಾಗಿ ನೋಡಿಕೊಳ್ಳುತ್ತಿರುವ ರೈಲ್ವೆ ಸಚಿವ ಪಿಯೂಷ್ ಗೋಯಲ್ ಸೌತ್ ಬ್ಲಾಕ್ನ ಹಣಕಾಸು ಮಂತ್ರಿಯ ಕಚೇರಿಗೆ ಬರುತ್ತಾರಾದರೂ ಕೂಡ ಮಿನಿಸ್ಟರ್ ಕುರ್ಚಿ ಮೇಲೆ ಕೂರದೆ ಪಕ್ಕದಲ್ಲಿರುವ ಸೋಫಾ ಮೇಲೆ ಕುಳಿತು ಸಭೆ ನಡೆಸುತ್ತಾರೆ.
ಜೇಟ್ಲಿಯವರ ಅಧಿಕಾರಿಗಳನ್ನು ಕೂಡ ಬದಲಿಸುವ ಗೊಡವೆಗೆ ಹೋಗದ ಪಿಯೂಷ್, ಏನೇ ನಿರ್ಣಯ ತೆಗೆದುಕೊಳ್ಳಬೇಕಾದರೂ ಕೂಡ ಜೇಟ್ಲಿ ಜತೆ ಫೋನ್ನಲ್ಲಿ ಮಾತನಾಡಿಯೇ ಮುಂದೆ ಹೆಜ್ಜೆ ಇಡುತ್ತಾರೆ. ಅಂದ ಹಾಗೆ ಅರುಣ್ ಜೇಟ್ಲಿ ಮಾನ್ಸೂನ್ ಅಧಿವೇಶನದಿಂದ ಕೆಲಸಕ್ಕೆ ಹಾಜರಾಗುತ್ತಾರಂತೆ.
-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.