
ನವದೆಹಲಿ (ಏ.04): ವಿತ್ತ ಸಚಿವ ಅರುಣ್ ಜೇಟ್ಲಿ ವಿರುದ್ಧ ಮಾನನಷ್ಟ ಮೊಕದ್ದಮೆ ಪ್ರಕರಣವನ್ನು ಎದುರಿಸುತ್ತಿರುವ ಅರವಿಂದ್ ಕೇಜ್ರಿವಾಲ್ ಪರ ವಾದ ಮಾಡುತ್ತಿರುವ ಹಿರಿಯ ವಕೀಲ ರಾಮ್ ಜೇಠ್ಮಲಾನಿ ಹಣ ತೆಗೆದುಕೊಳ್ಳದೇ ಉಚಿತವಾಗಿ ಕೋರ್ಟ್ ನಲ್ಲಿ ವಾದ ಮಾಡಲಿದ್ದಾರಂತೆ! ಹಾಗಂತ ಸ್ವತ: ಅವರೇ ಹೇಳಿಕೊಂಡಿದ್ದಾರೆ.
ನಾನು ಶ್ರೀಮಂತರಿಂದ ಮಾತ್ರ ಹಣ ತೆಗೆದುಕೊಳ್ಳುತ್ತೇನೆ. ಬಡವರಿಂದ ಹಣ ತೆಗೆದುಕೊಳ್ಳುವುದಿಲ್ಲ. ಉಚಿತವಾಗಿ ವಾದ ಮಾಡುತ್ತೇನೆ. ಒಂದು ವೇಳೆ ಸರ್ಕಾರ ಅಥವಾ ಕೇಜ್ರಿವಾಲ್ ಗೆ ಹಣ ಪಾವತಿಸಲು ಆಗದೇ ಇದ್ದರೆ ನಾನು ಫ್ರೀ ಆಗಿ ವಾದ ಮಾಡುತ್ತೇನೆ. ನನ್ನ ಬಡ ಕಕ್ಷಿದಾರರಲ್ಲಿ ಇವರು ಒಬ್ಬರು ಅಂದುಕೊಳ್ಳುತ್ತೇನೆ ಎಂದು ಜೇಠ್ಮಲಾನಿ ಹೇಳಿದ್ದಾರೆ.
ಜೇಠ್ಮಲಾನಿ ಕಚೇರಿಯಿಂದ ಮುಂಚಿತವಾಗಿ 1 ಕೋಟಿ ರೂ ಹಾಗೂ ಪ್ರತಿ ವಿಚಾರಣೆಗೂ 22 ಲಕ್ಷ ರೂ ಅನ್ನು ಕೇಜ್ರಿವಾಲ್ ನೀಡಬೇಕೆಂದು ಬೇಡಿಕೆಯಿಡಲಾಗಿತ್ತು ಎನ್ನಲಾಗಿದೆ. ಅದರಂತೆ ಜೇಠ್ಮಲಾನಿ 11 ಬಾರಿ ವಿಚಾರಣೆಗೆ ಹಾಜರಾಗಿದ್ದು 3.24 ಕೋಟಿ ರೂಗಳನ್ನು ಕೇಜ್ರಿ ಕೊಡುವುದು ಬಾಕಿಯಿದೆ. ಅದಿನ್ನೂ ಪಾವತಿಯಾಗಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.