
ಭುವನೇಶ್ವರ: ದೇವಸ್ಥಾನದ ಆಡಳಿತ ನಿರ್ವಹಣೆ ಕರ್ನಾಟಕದ ಧರ್ಮಸ್ಥಳ ದೇವಾಲಯವನ್ನು ನೋಡಿ ಕಲಿಯಿರಿ ಎಂದು ಸುಪ್ರೀಂ ಕೋರ್ಟ್ ತರಾಟೆಗೆ ಗುರಿಯಾಗಿದ್ದ ಒಡಿಶಾದ ಪುರಿ ಜಗನ್ನಾಥ ದೇವಸ್ಥಾನ ಆಡಳಿತ ಮಂಡಳಿ ಶನಿವಾರ ಕೆಲವೊಂದು ಮಹತ್ವದ ಬದಲಾವಣೆಗಳನ್ನು ಘೋಷಿಸಿದೆ.
ಆ ಪ್ರಕಾರ, ಮುಖ್ಯವಾಗಿ ದೇವಸ್ಥಾನದಲ್ಲಿ ಯಾವುದೇ ಸಿಬ್ಬಂದಿ ಭಕ್ತರಿಂದ ದಕ್ಷಿಣೆ ಅಥವಾ ಕಾಣಿಕೆಗಳನ್ನು ಸ್ವೀಕರಿಸಕೂಡದು ಎಂದು ಸುತ್ತೋಲೆಯೊಂದರಲ್ಲಿ ತಿಳಿಸಲಾಗಿದೆ. ಭಕ್ತರು ತಮ್ಮ ದಕ್ಷಿಣೆ, ಕಾಣಿಕೆಗಳನ್ನು ಸಿಬ್ಬಂದಿಗೆ ನೀಡದೆ, ಹುಂಡಿಯಲ್ಲೇ ಹಾಕುವಂತೆ, ಅಥವಾ ದೇವಸ್ಥಾನದ ಕಚೇರಿಗಳಲ್ಲಿ ನೀಡಿ, ರಶೀದಿ ಪಡೆಯುವಂತೆ ವಿನಂತಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.