ದೇವಸ್ಥಾನದ ಆಡಳಿತ ನಿರ್ವಹಣೆ ಕರ್ನಾಟಕದ ಧರ್ಮಸ್ಥಳ ದೇವಾಲಯವನ್ನು ನೋಡಿ ಕಲಿಯಿರಿ ಎಂದು ಸುಪ್ರೀಂ ಕೋರ್ಟ್ ತರಾಟೆಗೆ ಗುರಿಯಾಗಿದ್ದ ಒಡಿಶಾದ ಪುರಿ ಜಗನ್ನಾಥ ದೇವಸ್ಥಾನ ಆಡಳಿತ ಮಂಡಳಿ ಶನಿವಾರ ಕೆಲವೊಂದು ಮಹತ್ವದ ಬದಲಾವಣೆಗಳನ್ನು ಘೋಷಿಸಿದೆ.
ಭುವನೇಶ್ವರ: ದೇವಸ್ಥಾನದ ಆಡಳಿತ ನಿರ್ವಹಣೆ ಕರ್ನಾಟಕದ ಧರ್ಮಸ್ಥಳ ದೇವಾಲಯವನ್ನು ನೋಡಿ ಕಲಿಯಿರಿ ಎಂದು ಸುಪ್ರೀಂ ಕೋರ್ಟ್ ತರಾಟೆಗೆ ಗುರಿಯಾಗಿದ್ದ ಒಡಿಶಾದ ಪುರಿ ಜಗನ್ನಾಥ ದೇವಸ್ಥಾನ ಆಡಳಿತ ಮಂಡಳಿ ಶನಿವಾರ ಕೆಲವೊಂದು ಮಹತ್ವದ ಬದಲಾವಣೆಗಳನ್ನು ಘೋಷಿಸಿದೆ.
ಆ ಪ್ರಕಾರ, ಮುಖ್ಯವಾಗಿ ದೇವಸ್ಥಾನದಲ್ಲಿ ಯಾವುದೇ ಸಿಬ್ಬಂದಿ ಭಕ್ತರಿಂದ ದಕ್ಷಿಣೆ ಅಥವಾ ಕಾಣಿಕೆಗಳನ್ನು ಸ್ವೀಕರಿಸಕೂಡದು ಎಂದು ಸುತ್ತೋಲೆಯೊಂದರಲ್ಲಿ ತಿಳಿಸಲಾಗಿದೆ. ಭಕ್ತರು ತಮ್ಮ ದಕ್ಷಿಣೆ, ಕಾಣಿಕೆಗಳನ್ನು ಸಿಬ್ಬಂದಿಗೆ ನೀಡದೆ, ಹುಂಡಿಯಲ್ಲೇ ಹಾಕುವಂತೆ, ಅಥವಾ ದೇವಸ್ಥಾನದ ಕಚೇರಿಗಳಲ್ಲಿ ನೀಡಿ, ರಶೀದಿ ಪಡೆಯುವಂತೆ ವಿನಂತಿಸಲಾಗಿದೆ.