ಪುರಿ ಮಂದಿರದಲ್ಲಿ ಸಂಭವಿಸಿತಾ ಪವಾಡ!

Published : Jun 16, 2018, 10:00 AM IST
ಪುರಿ ಮಂದಿರದಲ್ಲಿ ಸಂಭವಿಸಿತಾ  ಪವಾಡ!

ಸಾರಾಂಶ

12ನೇ ಶತಮಾನದ ಇಲ್ಲಿನ ಪುರಿ ಜಗನ್ನಾಥ ಮಂದಿರದ ಒಳಗಿನ ಖಜಾನೆಯ ನಕಲಿ ಕೀಲಿ ಕೈಗಳು ಪತ್ತೆಯಾಗಿವೆ ಎಂದು ಪುರಿ ಜಿಲ್ಲಾಧಿಕಾರಿ ಅರವಿಂದ್‌ ಅಗರವಾಲ್‌ ಅವರು ತಿಳಿಸಿದ್ದಾರೆ.

ಪುರಿ(ಒಡಿಶಾ): 12ನೇ ಶತಮಾನದ ಇಲ್ಲಿನ ಪುರಿ ಜಗನ್ನಾಥ ಮಂದಿರದ ಒಳಗಿನ ಖಜಾನೆಯ ನಕಲಿ ಕೀಲಿ ಕೈಗಳು ಪತ್ತೆಯಾಗಿವೆ ಎಂದು ಪುರಿ ಜಿಲ್ಲಾಧಿಕಾರಿ ಅರವಿಂದ್‌ ಅಗರವಾಲ್‌ ಅವರು ತಿಳಿಸಿದ್ದಾರೆ. ಅಲ್ಲದೆ, ಇದೊಂದು ಪವಾಡ ಎಂದು ಹೇಳಿದ್ದಾರೆ. ಆದರೆ, ಬಿಜೆಪಿ ಸೇರಿದಂತೆ ಇತರ ಪ್ರತಿಪಕ್ಷಗಳು ಖಜಾನೆಯ ಅಸಲಿ ಕೀಲಿ ಕೈಗಳು ಏನಾದವು ಎಂಬುದಾಗಿ ಪ್ರಶ್ನಿಸುತ್ತಿವೆ.

ಏ.4ರಂದು ಪುರಿ ಮಂದಿರದ ಖಜಾನೆಯ ಕೀಲಿ ಕೈಗಳು ನಾಪತ್ತೆಯಾಗಿವೆ ಎಂಬುದನ್ನು ಪುರಿ ಜಿಲ್ಲಾಡಳಿತ ಕಂಡುಕೊಂಡಿತ್ತು. ಇದು ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೂ ಕಾರಣವಾಗಿತ್ತು. ಆದರೆ, ಈ ಕುರಿತು ವಿಚಾರಣೆ ಕೈಗೊಂಡಿದ್ದ ನಾಲ್ವರು ಸಿಬ್ಬಂದಿಗಳಿಗೆ ದಾಖಲೆಗಳನ್ನಿಟ್ಟಿರುವ ಕೊಠಡಿಯಲ್ಲಿ ರತ್ನ ಭಂಡಾರದ ನಕಲಿ ಕೀಲಿ ಕೈಗಳು ಎಂಬುದಾಗಿ ಬರೆದ ಕಂದುಬಣ್ಣದ ಲಕೋಟೆ ಪತ್ತೆಯಾಗಿದೆ ಎಂದು ಪತ್ರಕರ್ತರಿಗೆ ಜಿಲ್ಲಾಧಿಕಾರಿ ಅಗರವಾಲ್‌ ಅವರು ಶುಕ್ರವಾರ ಮಾಹಿತಿ ನೀಡಿದ್ದಾರೆ. 

ನಾಪತ್ತೆಯಾದ ಭಂಡಾರ ಕೀಲಿ ಕೈಗಳಿಗಾಗಿ ಐದು ದಿನಗಳಿಂದ ಹುಡುಕಿದರೂ ಪತ್ತೆಯಾಗಿರಲಿಲ್ಲ. ಹೀಗಾಗಿ, ನೀನೇ ರಕ್ಷಿಸಬೇಕು ಎಂದು ದೇವರ ಮೊರೆ ಹೋಗಿದ್ದೆ. ಇದೀಗ ಪವಾಡಸದೃಶದಂತೆ ಕೀಲಿ ಕೈಗಳು ಪತ್ತೆಯಾಗಿವೆ ಎಂದಿದ್ದಾರೆ 2007ನೇ ಬ್ಯಾಚ್‌ ಐಎಎಸ್‌ ಅಧಿಕಾರಿ ಅಗರವಾಲ್‌.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್