
ಬೆಂಗಳೂರು (ಡಿ.24): ನೋಟು ಅಮಾನ್ಯ ಕ್ರಮದ ಬಳಿಕ ದೇಶದೆಲ್ಲೆಡೆ ಅದೆಷ್ಟೋ ಐಟಿ ದಾಳಿಗಳು ನಡೆಯುತ್ತಲೇ ಇದೆ. ಇದಕ್ಕೆ ಕರ್ನಾಟಕ ಕೂಡ ಹೊರತಾಗಿಲ್ಲ. ಕಳೆದ 24 ಗಂಟೆಗಳಲ್ಲೂ ದೇಶದ ಹಲವೆಡೆ ಐಟಿ ರೇಡ್ ನಡೆದಿದ್ದು, ತೆರಿಗೆ ವಂಚಕರಿಗೆ ಬಿಸಿ ಮುಟ್ಟಿದೆ.
ದೇಶದ ಹಲವೆಡೆ ಇದೀಗ, ಐಟಿ ಶಾಕ್'ನದ್ದೇ ಸುದ್ದಿ, ಕಪ್ಪುಕುಳಗಳ ಬೆನ್ನತ್ತಿ ತೆರಿಗೆ ಇಲಾಖೆ ಮಾಡುತ್ತಿರುವ ದಾಳಿಗಳು ದಿನಗಳೆದಂತೆ ಜಾಸ್ತಿಯಾಗ್ತಾನೇ ಇದೆ. ಕಳೆದ 24 ಗಂಟೆಗಳಲ್ಲಿ ತೆರಿಗೆ ವಂಚಕರ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು, ಕಪ್ಪುಕುಳಗಳ ಭ್ರಷ್ಚಾಚಾರವನ್ನು ಬಯಲಿಗೆಳೆದಿದೆ.
ರಾಷ್ಟ್ರ ರಾಜಧಾನಿ ದೆಹಲಿಯ ಇಂದಿರಾಗಾಂಧಿ ಏರ್'ಪೋರ್ಟ್ನಲ್ಲಿ 2000 ಮುಖಬೆಲೆಯ 53.78 ಲಕ್ಷ ಹೊಸ ನೋಟುಗಳು ಪತ್ತೆಯಾಗಿದ್ದು, ಕೈಗಾರಿಕಾ ಭದ್ರತಾ ಪಡೆಯಿಂದ ಈ ಹಣವನ್ನ ವಶಪಡಿಸಿಕೊಳ್ಳಲಾಗಿದೆ. ಇನ್ನು. ಸಿಲಿಕಾನ್ ಸಿಟಿಯ ಪ್ರಸಿದ್ಧ ಶಾಪಿಂಗ್ ಮಾಲ್ ಆದ ಗೋಪಾಲನ್ ಮಾಲ್ನ ಸಮೂಹ ಸಂಸ್ಥೆ ಸೇರಿದಂತೆ 20ಕ್ಕೂ ಹೆಚ್ಚು ಕಡೆ ನಿನ್ನೆ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ ದಾಖಲೆಗಳಿಲ್ಲದ 47.74 ಕೋಟಿ ಹಣವಿರೋ ಮಾಹಿತಿ ಸಿಕ್ಕಿದೆ. ಇತ್ತ, ರಾಜ್ಯದ ಗಡಿ ನಾಡು ಬೀದರ್ ನಗರದಲ್ಲೂ ದಾಖಲೆ ಇಲ್ಲದ 2 ಸಾವಿರ ಮುಖಬೆಲೆಯ 4 ಲಕ್ಷ ಹೊಸ ನೋಟುಗಳನ್ನು ಜಪ್ತಿ ಮಾಡಲಾಗಿದೆ.
2015-16ನೇ ಸಾಲಿನಲ್ಲಿ 70 ಲಕ್ಷ ತೆರಿಗೆ ವಂಚಕರು!
ಮತ್ತೊಂದು ಕುತೂಹಲಕಾರಿ ಅಂಶವೆಂದರೆ 2015 ಮತ್ತು 2016 ನೇ ಸಾಲಿನಲ್ಲಿ, ದೇಶದಾದ್ಯಂತ 70 ಲಕ್ಷ ತೆರಿಗೆದಾರದು ತೆರಿಗೆಯನ್ನೇ ಕಟ್ಟಿಲ್ಲ ಅನ್ನೋ ಸತ್ಯ ಬಯಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.