ದಾವಣಗೆರೆ ಬಿಜೆಪಿ ಸಂಸದ ಸಿದ್ದೇಶ್ವರ್'ಗೆ ಐಟಿ ದಾಳಿಯ ಬಿಸಿ

Published : May 19, 2017, 10:24 AM ISTUpdated : Apr 11, 2018, 12:35 PM IST
ದಾವಣಗೆರೆ ಬಿಜೆಪಿ ಸಂಸದ ಸಿದ್ದೇಶ್ವರ್'ಗೆ ಐಟಿ ದಾಳಿಯ ಬಿಸಿ

ಸಾರಾಂಶ

ಹಾವೇರಿ ತಾಲೂಕಿನ ಸಂಗೂರು ಸಕ್ಕರೆ ಕಾರ್ಖಾನೆ ಗುತ್ತಿಗೆದಾರರಾದ ಜಿಎಂ ಶುಗರ್ಸ್‌ನ ಕಚೇರಿ ಹಾಗೂ ಅಲ್ಲಿರುವ ಜಿಎಂ ಸಹಕಾರಿ ಸೌಹಾರ್ದ ಪತ್ತಿನ ಸಂಘದಲ್ಲೂ ಪರಿಶೀಲನೆ ನಡೆಸಿರುವ ಐಟಿ ಅಧಿಕಾರಿಗಳು ಹಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ, ಎರಡೂ ಕಚೇರಿ ಜಪ್ತಿ ಮಾಡಿದ್ದಾರೆ ಎನ್ನಲಾಗಿದೆ.

ಚಿತ್ರದುರ್ಗ: ರಾಜ್ಯದ ಪ್ರಭಾವಿ ಬಿಜೆಪಿ ಮುಖಂಡ, ಸಂಸದ ಜಿ.ಎಂ. ಸಿದ್ದೇಶ್ವರ್‌ ಕುಟುಂಬಕ್ಕೆ ಸೇರಿದ ಜಿ.ಎಂ. ಸಹಕಾರ ಸೌಹಾರ್ದ ಪತ್ತಿನ ನಿಯಮಿತ, ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರದ ಮನೆ, ಕಚೇರಿ, ಹಾವೇರಿ ಜಿಲ್ಲೆಯಲ್ಲಿರುವ ಜಿಎಂ ಶುಗರ್ಸ್‌ ನ ಕಚೇರಿ ಸೇರಿ ಐದು ಕಡೆ ಗುರುವಾರ ಏಕಕಾಲಕ್ಕೆ ದಾಳಿ ನಡೆಸಿರುವ ತೆರಿಗೆ ಇಲಾಖೆ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಮೂಲತಃ ಭೀಮಸಮುದ್ರದವರಾದ ಸಿದ್ದೇಶ್ವರ್‌ ಒಡೆತ​ನದ ವ್ಯಾಪಾರ, ವಹಿವಾಟು ಕೇಂದ್ರಗಳು, ಮನೆ ಹಾಗೂ ಕಚೇರಿಗಳ ಮೇಲೆ ಏಕಕಾಲಲ್ಲಿ ಈ ದಾಳಿ ನಡೆದಿದೆ. ಸಿದ್ದೇಶ್ವರ್‌ ಸಹೋದರ ಜಿ.ಎಂ.ಪ್ರಸನ್ನಕುಮಾರ ಅವರ ಕಚೇರಿಯಲ್ಲೂ ದಾಖಲೆಗಳ ಪರಿಶೀಲನೆ ನಡೆದಿದೆ.

ಬೆಳಗ್ಗೆ 10ಕ್ಕೆ: ದಾವಣಗೆರೆಯಲ್ಲಿರುವ ಸಿದ್ದೇಶ್ವರ್‌ ಕಚೇರಿ, ಅಡಕೆ ಮಂಡಿ, ಮನೆ ಮೇಲೆ 8 ಅಧಿಕಾರಿಗಳನ್ನೊಳಗೊಂಡ ತಂಡಗಳು ಬೆಳಗ್ಗೆ 10ಕ್ಕೆ ಏಕಕಾಲಕ್ಕೆ ದಾಳಿ ಆರಂಭಿಸಿದವು. ಭೀಮಸಮುದ್ರದ ನಿವಾಸ, ಅಲ್ಲಿನ ಶ್ರೀ ಪ್ರಸನ್ನ ಟ್ರೇಡ​ರ್‍ಸ್ ಅಡಕೆ ಮಂಡಿ, ಜಿ.ಎಂ.ಸೌಹಾರ್ದ ಬ್ಯಾಂಕ್‌, ಮೇಗಲಹಳ್ಳಿ ಸಮೀಪದ ಸೂಪರ್‌ ಗುಟ್ಕಾ ಫ್ಯಾಕ್ಟರಿ, 2 ಮನೆಗಳ ಮೇಲೆ ದಾಳಿ ನಡೆಸಿ ದಾಖಲೆ, ಕಾಗದ ಪತ್ರಗಳನ್ನು ಅಧಿಕಾರಿಗಳ ತಂಡ ಪರಿಶೀಲಿಸಿದೆ.

2 ಕಚೇರಿ ಜಪ್ತಿ: ಈ ನಡುವೆ, ಹಾವೇರಿ ತಾಲೂಕಿನ ಸಂಗೂರು ಸಕ್ಕರೆ ಕಾರ್ಖಾನೆ ಗುತ್ತಿಗೆದಾರರಾದ ಜಿಎಂ ಶುಗರ್ಸ್‌ನ ಕಚೇರಿ ಹಾಗೂ ಅಲ್ಲಿರುವ ಜಿಎಂ ಸಹಕಾರಿ ಸೌಹಾರ್ದ ಪತ್ತಿನ ಸಂಘದಲ್ಲೂ ಪರಿಶೀಲನೆ ನಡೆಸಿರುವ ಐಟಿ ಅಧಿಕಾರಿಗಳು ಹಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ, ಎರಡೂ ಕಚೇರಿ ಜಪ್ತಿ ಮಾಡಿದ್ದಾರೆ ಎನ್ನಲಾಗಿದೆ.

ಕನ್ನಡಪ್ರಭ ವಾರ್ತೆ
epaper.kannadaprabha.in

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಳ್ಳಾರಿಯಲ್ಲಿ ಎಫ್‌ಡಿಎ ಸ್ಪರ್ಧಾತ್ಮಕ ಪರೀಕ್ಷೆ: ಕಾಲು ಗೆಜ್ಜೆ ತೆಗೆದು ಪರೀಕ್ಷೆ ಬರೆದ ವಿದ್ಯಾರ್ಥಿನಿಯರು
ಜವರಾಯನಂತೆ ಬಂತು ಜಲ್ಲಿಕಲ್ಲು ತುಂಬಿದ್ದ ಲಾರಿ: ಮನೆ ಮುಂದೆ ಚಳಿ ಕಾಯಿಸುತ್ತಿದ್ದ 90 ವರ್ಷದ ವೃದ್ಧ ಬಲಿ