
ಬೆಂಗಳೂರು (ಏ. 03): ಕರ್ನಾಟಕ ವಿಧಾನಸಭಾ ಚುನಾವಣಾ ಹಿನ್ನಲೆಯಲ್ಲಿ ರಾಜ್ಯ ಚುನಾವಣೆ ಮೇಲೆ ಐಟಿ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ಚುನಾವಣೆಯ ಹಣಕಾಸು ವಹಿವಾಟಿನ ಮೇಲೆ ಐಟಿ ಅಧಿಕಾರಿಗಳಿಂದ ತೀವ್ರ ನಿಗಾ ವಹಿಸಿದ್ದಾರೆ.
ಕ್ವೀನ್ಸ್ ರಸ್ತೆಯ ಐಟಿ ಇಲಾಖೆಯ ಕಛೇರಿಯಲ್ಲಿ 24 ಗಂಟೆ ಕಂಟ್ರೋಲ್ ರೂಂ ತೆರೆದಿರುತ್ತದೆ. ಚುನಾವಣೆಯಲ್ಲಿ ಆಕ್ರಮ ಹಣಕಾಸು ಹಂಚಿಕೆಗಳ ಬಗ್ಗೆ ಸಾರ್ವಜನಿಕರಿಂದ ದೂರು ಸ್ವೀಕರಿಸಲು ಮತ್ತು ತುರ್ತು ಕಾರ್ಯಚರಣೆಗೆ 24 ಗಂಟೆ ಕಂಟ್ರೋಲ್ ರೂಂ ತರೆದಿದ್ದಾರೆ ಐಟಿ ಅಧಿಕಾರಿಗಳು. ಚುನಾವಣಾ ಆಯೋಗದ ಸೂಚನೆ ಮೇರೆಗೆ ಐಟಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.
ಚುನಾವಣೆಯ ಆಕ್ರಮಗಳ ಪರೀವೀಕ್ಷಣೆ ಮತ್ತು ಹಣಕಾಸು ನಿಯಂತ್ರಣಕ್ಕೆ ಐಟಿ ಇಲಾಖೆ ಮುಂದಾಗಿದೆ.
ಟೋಲ್ ಫ್ರೀ ಸಂಖ್ಯೆ 18004252115 ಪೋನ್ : 080 22861126 ಮೊಬೈಲ್ : 8277413614 /8277422825 ಈ ನಂಬರ್ ಗೆ ಕರೆ ಮಾಡಿ ಚುನಾವಣಾ ಆಕ್ರಮಗಳ ಬಗ್ಗೆ ದೂರು ನೀಡುವಂತೆ ಐಟಿ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.