
ನವದೆಹಲಿ : ಪಿತೂರಿ ಸಿದ್ಧಾಂತ ಪ್ರಕಾರವಾಗಿ ವಿಶ್ವದ ಅಂತ್ಯವು ಸಮೀಪಿಸುತ್ತಿದೆ ಎಂದು ಹೇಳಲಾಗಿದೆ.
ಅದರ ಪ್ರಕಾರ ಇದೇ ಏ. 23 ರಂದು ಜಗತ್ತೇ ಕೊನೆಗೊಳ್ಳುವಂತಹ ಆರಂಭಿಕ ವಿದ್ಯಮಾನವು ನಡೆಯಲಿದೆ. ಅಂದು ರಾತ್ರಿ ಆಕಾಶದಲ್ಲಿ ನಿಬಿರು ಗ್ರಹವು ಕಾಣಿಸಿಕೊಳ್ಳಲಿದೆ ಎಂದು ಈ ಸಿದ್ಧಾಂತವು ಹೇಳಿದೆ. ಅದೇ ಭೂಮಿ ಅಂತ್ಯವಾಗುವ ಮುನ್ಸೂಚನೆಯಾಗಿದೆ. ಅಂದಿನಿಂದ ಒಟ್ಟು 7 ವರ್ಷಗಳಲ್ಲಿ ಭೂಮಿಯಲ್ಲಿ ಅತ್ಯಂತ ಕ್ಲೇಷದ ವಾತಾವರಣ ನಿರ್ಮಾಣವಾಗಿ ವಿಶ್ವವೇ ಅಂತ್ಯವಾಗಲಿದೆ.
ಸೂರ್ಯ, ಚಂದ್ರ, ಗುರು ಗ್ರಹಗಳು ಒಂದೇ ಕಡೆ ಬರಲಿವೆ. ಭೂಮಿಯ ಅತ್ಯಂತ ಸಮೀಪಕ್ಕೆ ನಿಬಿರು ಬರಲಿದೆ. ಇದರಿಂದ ಭೂಮಿಯಲ್ಲಿ ಮೂರನೇ ವಿಶ್ವ ಯುದ್ಧ ಸಂಭವಿಸಲಿದೆ ಎಂದು ಹೇಳಿದ್ದಾರೆ.
ಆದರೆ ಪದೇ ಪದೇ ಇಂತಹ ಸುದ್ದಿಗಳು ಹಬ್ಬುತ್ತಿದ್ದು, ಭೂಮಿಯು ಅಂತ್ಯವಾಗುತ್ತದೆ ಎನ್ನುವ ಅನೇಕ ದಿನಗಳು ಈಗಾಗಲೇ ದಾಟಿವೆ. ಇಂತಹ ಯಾವುದೇ ವಿದ್ಯಮಾನವು ಸಂಭವಿಸದು ಎಂದು ಈ ವಿಚಾರವನ್ನು ವಿಜ್ಞಾನಿಗಳು ತಳ್ಳಿ ಹಾಕಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.