ದೆಹಲಿ ಉಪ-ಮುಖ್ಯಮಂತ್ರಿ ಸಿಸೋದಿಯಾ ಮೇಲೆ ಮಸಿ ಎಸೆತ

Published : Sep 19, 2016, 10:28 AM ISTUpdated : Apr 11, 2018, 12:43 PM IST
ದೆಹಲಿ ಉಪ-ಮುಖ್ಯಮಂತ್ರಿ ಸಿಸೋದಿಯಾ ಮೇಲೆ ಮಸಿ ಎಸೆತ

ಸಾರಾಂಶ

ನವದೆಹಲಿ (ಸೆ.19): ದೆಹಲಿ ಉಪ-ಮುಖ್ಯಮಂತ್ರಿ ಮನೀಶ್ ಸಿಸೊದಿಯಾ ಮೇಲೆ ವ್ಯಕ್ತಿಯೊಬ್ಬ ಮಸಿ ಎಸೆದ ಘಟನೆ ಇಂದು ನಡೆದಿದೆ.

ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರನ್ನು ಅಧಿಕರತ ನಿವಾಸದಲ್ಲಿ ಭೇಟಿಯಾಗಿ ಹೊರ ಬಂದು ಪತ್ರಕರ್ತರನ್ನುದ್ದೆಶಿಸಿ ಮಾತನಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಸಿಸೋದಿಯಾ ಮೇಲೆ ಮಸಿ ಎಸೆದ ವ್ಯಕ್ತಿಯನ್ನು ಬ್ರಿಜೇಶ್ ಶುಕ್ಲಾ ಎಮದು ಗುರುತಿಸಲಾಗಿದೆ.

ದೆಹಲಿಯಲ್ಲಿ ಮಾರಣಾಂತಿಕ ಚಿಕನ್ ಗುನ್ಯಾ ಹಾಗು ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವ ಸನ್ನಿವೇಶದಲ್ಲಿ ಸಿಸೋದಿಯಾ ಫಿನ್’ಲ್ಯಾಂಡ್’ಗೆ ಪ್ರವಾಸ ಕೈಗೊಂಡಿದ್ದ ಕ್ರಮ ವ್ಯಾಪಕ ಟೀಕೆಗೊಳಗಾಗಿತ್ತು.

ಪ್ರವಾಸವನ್ನು ತಕ್ಷಣ ಮೊಟಕುಗೊಳಿಸಿ ದೆಹಲಿಗೆ ವಾಪಸಾಗುವಂತೆ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಸಿಸೊದಿಯಾಗೆ ಸೂಚಿಸಿದ್ದರು.

ಈ ವಿಚಾರವಾಗಿ ಅವರು ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು: 2 ಲಕ್ಷ ಬೆಲೆಯ ಗಿಳಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವಕ!
ವಿಮಾನದಲ್ಲಿ ಹೃದಯಾಘಾತ- ಅಮೆರಿಕ ಪ್ರಜೆಯ ಜೀವ ಉಳಿಸಿದ ಡಾ. ಅಂಜಲಿ ನಿಂಬಾಳ್ಕರ್