ಇನ್ನೆಷ್ಟು ಗೌರಿ, ದೀಪಕ್, ಬಷೀರ್...ರ ಕೊಲೆಗಳಿಗಾಗಿ ಕಾಯುತ್ತಿದ್ದೀರ ಸಿದ್ದರಾಮಯ್ಯನವರೆ?

Published : Jan 09, 2018, 03:32 PM ISTUpdated : Apr 11, 2018, 12:59 PM IST
ಇನ್ನೆಷ್ಟು ಗೌರಿ, ದೀಪಕ್, ಬಷೀರ್...ರ ಕೊಲೆಗಳಿಗಾಗಿ ಕಾಯುತ್ತಿದ್ದೀರ ಸಿದ್ದರಾಮಯ್ಯನವರೆ?

ಸಾರಾಂಶ

ಕುವೆಂಪುರವರು 'ಮನುಜಮತ ವಿಶ್ವಪಥ' ಸಂದೇಶ ಸಾರಿದ್ದರು. ನನ್ನ ತಂದೆ ಲಂಕೇಶ್ "ಇಟ್ಟಿಗೆ ಪವಿತ್ರವಲ್ಲ ಜೀವ ಪವಿತ್ರ"ಎಂಬ ಸಾರ್ವಕಾಲಿಕ ಶ್ರೇಷ್ಠ ಎಂದು ಹೇಳಿದ್ದರು.

ಮಂಗಳೂರು(ಜ.09): ಕೋಮುದ್ವೇಷದಿಂದ ಹತ್ಯೆಯಾದ ದೀಪಕ್ ರಾವ್ ಹಾಗೂ ಅಹಮದ್ ಬಶೀರ್ ಅವರ ಮನೆಗಳಿಗೆ ಪತ್ರಕರ್ತ ಹಾಗೂ ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಭೇಟಿ ನೀಡಿ ಸಾಂತ್ವನ ಹೇಳಿ ಎರಡೂ ಕುಟುಂಬಗಳಿಗೂ ತಲಾ 25 ಸಾವಿರ ರೂ. ಚೆಕ್ ವಿತರಿಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುವೆಂಪುರವರು 'ಮನುಜಮತ ವಿಶ್ವಪಥ' ಸಂದೇಶ ಸಾರಿದ್ದರು. ನನ್ನ ತಂದೆ ಲಂಕೇಶ್ "ಇಟ್ಟಿಗೆ ಪವಿತ್ರವಲ್ಲ ಜೀವ ಪವಿತ್ರ"ಎಂಬ ಸಾರ್ವಕಾಲಿಕ ಶ್ರೇಷ್ಠ ಎಂದು ಹೇಳಿದ್ದರು. ಇವೆಲ್ಲವೂ ಜಾತಿ ಧರ್ಮಗಳಿಗಿಂತ ಮನುಕುಲ ಮುಖ್ಯ ಎಂಬುದನ್ನು ಒತ್ತಿ ಹೇಳಿದ್ದವು. ಆದರೆ ಈ ಸರ್ಕಾರ ಜಾತಿಗೆ ಜಾತಿ ಮತ್ತು ಧರ್ಮಕ್ಕೆ ಧರ್ಮವನ್ನು ಎತ್ತಿಕಟ್ಟಿ ಅಮಾಯಕರ ಹತ್ಯೆ ಮಾಡುತ್ತಿದೆ. ಗೌರಿ ಸತ್ತು ನಾಲ್ಕು ತಿಂಗಳಾಯಿತು.ಸರ್ಕಾರ ಏನು ಮಾಡುತ್ತಿದೆ? ಇನ್ನೆಷ್ಟು ಗೌರಿ, ದೀಪಕ್, ಬಷೀರ್...ರ ಕೊಲೆಗಳಿಗಾಗಿ ಕಾಯುತ್ತಿದ್ದೀರಾ ಸಿದ್ದರಾಮಯ್ಯನವರೆ?ಇನ್ನೆಷ್ಟು ಕೋಮು ಗಲಭೆ ನಡೆಸಬೇಕಿಂದಿದ್ದೀರಿ? ಎಂದು ಆಕ್ರೋಶ ವ್ಯಕ್ತಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Mysore: ಗೌರವ ಕೊಡದ ಹೆಂಡ್ತಿ ಕೊಲ್ಲಲು ಸುಪಾರಿ ಕೊಟ್ಟ ಪತಿರಾಯ!
ರಹಸ್ಯ ಡಿನ್ನರ್ ಮೀಟಿಂಗ್‌ನಲ್ಲಿ 'ಅಹಿಂದ' ಮಾಸ್ಟರ್ ಪ್ಲಾನ್! ಸಿಎಂ ಕುರ್ಚಿ ಉಳಿಸಿಕೊಳ್ಳಲು ಬೆಳಗಾವಿಯಲ್ಲಿ ಹೊಸ ರಣತಂತ್ರ?