ನಂಬಿಕೆ ವಿಷ್ಯದಲ್ಲಿ ಸೇನೆ ಫಸ್ಟ್, ರಾಜಕಾರಣಿಗಳು ಲಾಸ್ಟ್: ಇಲ್ಲಿದೆ ಭಾರತೀಯರ ಇಷ್ಟ-ಅನಿಷ್ಟಗಳ ಲಿಸ್ಟ್!

Published : Sep 19, 2019, 03:13 PM IST
ನಂಬಿಕೆ ವಿಷ್ಯದಲ್ಲಿ ಸೇನೆ ಫಸ್ಟ್, ರಾಜಕಾರಣಿಗಳು ಲಾಸ್ಟ್: ಇಲ್ಲಿದೆ ಭಾರತೀಯರ ಇಷ್ಟ-ಅನಿಷ್ಟಗಳ ಲಿಸ್ಟ್!

ಸಾರಾಂಶ

ಭಾರತೀಯರ ನಂಬಿಕೆ ವಿಷ್ಯದಲ್ಲಿ ಯೋಧರು ಪ್ರಥಮ, ರಾಜಕಾರಣಿಗಳು ಅಂತಿಮ| ಲೀಡರ್‌ಗಳಾದ್ರೂ ನಂಬಿಕೆಗೆ ಅನರ್ಹರು ಅಂದ್ರು ಭಾರತೀಯರು| ಎರಡು, ಮೂರನೇ ಸ್ಥಾನದಲ್ಲಿ ಯಾರಿದ್ದಾರೆ?

ನವದೆಹಲಿ[ಸೆ.19]: ನಗರ ಪ್ರದೇಶದ ಶೇ. 70ಕ್ಕೂ ಅಧಿಕ ಮಂದಿ ಭಾರತೀಯ ಸೇನೆಯ ಸಶಸ್ತ್ರ ಮೀಸಲು ಪಡೆಯ ಮೇಲೆ ಅತಿ ಹೆಚ್ಚು ವಿಶ್ವಾಸ ಪ್ರಕಟಿಸಿದ್ದು, ರಾಜಕಾರಣಿಗಳನ್ನು ಅನುಮಾನದ ದೃಷ್ಟಿಯಲ್ಲಿ ನೋಡಿದ್ದಾರೆ. ಇಂತಹುದ್ದೊಂದು ವಿಚಾರ ಸಮೀಕ್ಷೆಯೊಂದರಲ್ಲಿ ಬಯಲಾಗಿದೆ. ಮಾರ್ಕೆಟ್ ರಿಸರ್ಚ್ ಫರ್ಮ್ ಇಪ್ಸೋಸ್ ನಡೆಸಿದ ಸಮೀಕ್ಷೆಯೊಂದ ಅನ್ವಯ, ವಿಜ್ಞಾನಿಗಳು ಹಾಗೂ ಶಿಕ್ಷಕರು ಭಾರತದ ಅತ್ಯಂತ ವಿಶ್ವಾಸಾರ್ಹರಲ್ಲಿ ಎರಡನೇ ಹಾಗು ಮೂರನೇ ಸ್ಥಾನದಲ್ಲಿದ್ದಾರೆ. 

'ಗ್ಲೋಬಲ್ ಟ್ರಸ್ಟ್ ಇನ್ ಪ್ರೊಫೆಶನ್ಸ್' ಶೀರ್ಷಿಕೆಯಡಿ ನಡೆಸಲಾದ ಈ ಸಮೀಕ್ಷೆಯಲ್ಲಿ ಶೇ. 59ರಷ್ಟು ಭಾರತದ ನಗರ ವಾಸಿಗಳು ರಾಜಕೀಯ ಹಾಗೂ ರಾಜಕಾರಣಿಗಳನ್ನು ವಿಶ್ವಾಸಕ್ಕೆ ಯೋಗ್ಯವಲ್ಲದವರು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಾದ ಬಳಿಕ ಶೇ. 52ರಷ್ಟು ಮಂದಿ ಸರ್ಕಾರಿ ಅಧಿಕಾರಿಗಳು ಹಾಗೂ ಶೇ. 41 ರಷ್ಟು ಮಂದಿ ಜಾಹೀರಾತುದಾರರನ್ನು ವಿಶ್ವಾಸಕ್ಕೆ ಯೋಗ್ಯರಲ್ಲದವರು ಎಂದು ತಿಳಿಸಿದ್ದಾರೆ.

ಈ ಕುರಿತಾಗಿ ಪ್ರತಿಕ್ರಿಯಿಸಿದ ಇಸ್ಪೋಸ್ ಇಂಡಿಯಾದ ಅಧಿಕಾರಿಯೊಬ್ಬರು 'ಅಧಿಕ ಮಂದಿ ತ್ಯಾಗ, ಬಲಿದಾನ, ಬದ್ಧತೆ ಹಾಗೂ ಶಿಸ್ತಿನಿಂದ ಕೂಡಿದ ಸಶಸ್ತ್ರ ಮೀಸಲು ಪಡೆಯನ್ನು ನಂಬಿಕೆಗೆ ಅರ್ಹವಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ' ಎಂದು ತಿಳಿಸಿದ್ದಾರೆ.

ಅಲ್ಲದೇ 'ದೇಶ ನಿರ್ಮಿಸಲು ತಮ್ಮದೇ ಕೊಡುಗೆ ನೀಡುವ ವಿಜ್ಞಾನಿಗಳು ಹಾಗೂ ಶಿಕ್ಷಕ ವೃತ್ತಿಯ ಮೇಲೂ ಜನರು ನಂಬಿಕೆ ಹೊಂದಿದ್ದಾರೆ' ಎಂದಿದ್ದಾರೆ. 

ಜಾಗತಿಕ ಮಟ್ಟದಲ್ಲಿ ವಿಜ್ಞಾನಿಗಳು[ಶೇ. 60], ವೈದ್ಯರು[ಶೇ. 56] ಹಾಗೂ ಶಿಕ್ಷಕರು[ಶೇ. 52] ಮೂಲಕ ಅಗ್ರ ಸ್ಥಾನದಲ್ಲಿದ್ದಾರೆ. ಇಲ್ಲೂ ಜನರು ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಜಾಹೀರಾತುದಾರರನ್ನು ನಂಬಿಕೆಗೆ ಯೋಗ್ಯರಲ್ಲದವರೆಂದು ಬಣ್ಣಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಧರ ವಿಶ್ವಕಪ್ ಹೀರೋಯಿನ್ಸ್‌ಗಳಿಗೆ ದೊಡ್ಮನೆಯಿಂದ ಗೌರವ: ರಾಜ್ ಕುಟುಂಬದ ಆತಿಥ್ಯಕ್ಕೆ ಮೈಮರೆತ ಚಾಂಪಿಯನ್ನರು!
Vastu Shastra: ನೆನಪಿಡಿ, ಅದೃಷ್ಟ ಕೈಹಿಡಿಯಲು ದೇವಸ್ಥಾನಕ್ಕೆ ಈ ಮೂರು ವಸ್ತುಗಳನ್ನ ಗುಟ್ಟಾಗಿ ದಾನ ಮಾಡ್ಬೇಕು!