ಕೊಡುವ ಏಟಿಗೆ 1971 ಮರೆಯುತ್ತೀರಿ: ಲೆ.ಜ ಧಿಲ್ಲೋನ್ ವಾರ್ನಿಂಗ್!

Published : Sep 05, 2019, 01:16 PM IST
ಕೊಡುವ ಏಟಿಗೆ 1971 ಮರೆಯುತ್ತೀರಿ: ಲೆ.ಜ ಧಿಲ್ಲೋನ್ ವಾರ್ನಿಂಗ್!

ಸಾರಾಂಶ

ಪಾಕಿಸ್ತಾನಕ್ಕೆ ಭಾರತೀಯ ಸೇನೆಯಿಂದ ನೇರ ಎಚ್ಚರಿಕೆ| ಅಣ್ವಸ್ತ್ರ ದಾಳಿಯ ಕುರಿತು ಮಾತನಾಡುತ್ತಿರಯುವ ಪಾಕ್’ಗೆ ಎಚ್ಚರಿಕೆ| 1971ರ ಯುದ್ಧದ ಸೋಲನ್ನು ಮರೆಯುವಂತ ದೊಡ್ಡ ಏಟು ನೀಡುವುದಾಗಿ ಎಚ್ಚರಿಕೆ| ಪಾಕ್’ಗೆ ಅದರ ಸ್ಥಾನಮಾನ ನೆನಪು ಮಾಡಿಕೊಟ್ಟ ಚಿನಾರ್ ಕಾರ್ಪ್ಸ್ ಕಮಾಂಡರ್ ಲೆ.ಜ. ಕೆಜೆಎಸ್ ಧಿಲ್ಲೋನ್| ಕಣಿವೆಯಲ್ಲಿ ದುಷ್ಕೃತ ನಿಲ್ಲಿಸದಿದ್ದರೆ ಘೋರ ಪರಿಣಾಮ ಧಿಲ್ಲೋನ್ ವಾರ್ನಿಂಗ್!

ನವದೆಹಲಿ(ಸೆ.05): ಪದೇ ಪದೇ ಅಣ್ವಸ್ತ್ರ ದಾಳಿಯ ಕುರಿತು ಮಾತನಾಡುತ್ತಿರುವ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಖಡಕ್ ಎಚ್ಚರಿಕೆ ನೀಡಿದೆ. 

ಅಣ್ವಸ್ತ್ರ ಯುದ್ಧದ ಕನವರಿಕೆಯಲ್ಲಿರುವ ಪಾಕಿಸ್ತಾನಕ್ಕೆ, 1971ರ ಬಾಂಗ್ಲಾ ಯುದ್ಧ ಸೋಲನ್ನೂ ಮರೆಯುವಂತ  ದೊಡ್ಡ ಏಟು ನೀಡುವುದಾಗಿ ಚಿನಾರ್ ಕಾರ್ಪ್ಸ್ ಕಮಾಂಡರ್ ಲೆ.ಜ. ಕೆಜೆಎಸ್ ಧಿಲ್ಲೋನ್ ಎಚ್ಚರಿಕೆ ನೀಡಿದ್ದಾರೆ.

ಗಡಿಯಲ್ಲಿ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುವುದಷ್ಟೇ ಅಲ್ಲದೇ ಅಣ್ವಸ್ತ್ರ ಪ್ರಯೋಗದ ಕುರಿತು ಪ್ರಸ್ತಾಪಿಸುವ ಮೂಲಕ ಪಾಕಿಸ್ತಾನ ಭಾರತವನ್ನು ಕೆಣಕುತ್ತಿದೆ ಎಂದು ಧಿಲ್ಲೋನ್  ಕಿಡಿಕಾರಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿನ ಕೃತ್ಯಗಳನ್ನು ನಿಲ್ಲಿಸದೇ ಹೋದಲ್ಲಿ ಆ ದೇಶವನ್ನೇ ಬಲಿ ಪಡೆಯುವ ಕೆಲಸ ಮಾಡಬೇಕಾಗುತ್ತದೆ ಎಂದು ಧಿಲ್ಲೋನ್ ಪಾಕಿಸ್ತಾನಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.

ಪಾಕಿಸ್ತಾನ 1971ರ ಯುದ್ಧದ ಸೋಲನ್ನು ಮರೆತಿರುವಂತಿದೆ. ಭಾರತದ ವಿರುದ್ಧದ ತನ್ನ ದುಷ್ಕೃತ್ಯಗಳನ್ನು ನಿಲ್ಲಿಸದೇ ಹೋದಲ್ಲಿ 1971ರ ಯುದ್ಧದ ಸೋಲನ್ನು ಶಾಶ್ವತವಾಗಿ ಮರೆಯುವಂತ ಹೊಡೆತ ನೀಡುವುದಾಗಿ ಲೆ.ಜ. ಧಿಲ್ಲೋನ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹಿಂದಿ ಹೇರಿಕೆ ಬಗ್ಗೆ ನ್ಯಾ। ನಾಗರತ್ನ ಬೇಸರ
ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ