
ಬಾರಮುಲ್ಲ/ನವದೆಹಲಿ(ಅ.9): ಸುಮಾರು 15 ದಿನಗಳ ಹಿಂದಷ್ಟೇ ನಮ್ಮ ಧೀರ ಯೋಧರು ಗಡಿ ನಿಯಂತ್ರಣ ರೇಖೆ ದಾಟಿ ಪಾಕ್ ಆಕ್ರಮಿತ ಕಾಶ್ಮಿರದ ಉಗ್ರರ ಶಿಬಿರಗಳನ್ನು ನಾಶ ಮಾಡಿ ಭಯೋತ್ಪಾದಕರನ್ನು ಸದೆಬಡಿದಿತ್ತು. ಈ ಸಾಧನೆ ಮಾಡಿದ್ದಕ್ಕೆ ಭಾರತೀಯ ಸೇನೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಶ್ಲಾಘನೆ ವ್ಯಕ್ತವಾಗಿತ್ತು.
ಆದರೆ ಶಿಬಿರಗಳಲ್ಲಿ ಹತ್ಯೆಯಾದ ಉಗ್ರರು ಮಾತ್ರ ಯಾವ ಸಂಘಟನೆಗೆ ಸೇರಿದ್ದವರೆಂದು ಪಾಕ್ ಸರಿಯಾಗಿ ಸ್ಪಷ್ಟನೆ ನೀಡಲಿಲ್ಲ. ಆದರೆ ಸೇನೆಯ ಕೆಲವೊಂದು ನಿರ್ಧರಿತ ವರದಿಗಳ ಆಧಾರದ ಮೇಲೆ ನಮ್ಮ ಕಮಾಂಡೊ ಪಡೆ ಕೊಂದು ಹಾಕಿದ ಉಗ್ರರ ಮಾಹಿತಿ ಲಭ್ಯವಾಗಿದ್ದು,ಅವರು ಪ್ರಮುಖ ಉಗ್ರ ಸಂಘಟನೆಯಾದ 'ಲಷ್ಕರ್ ಇ ತೊಯ್ಬಾ'ದ ಉಗ್ರರು.
ನಮ್ಮ ಸೇನೆಯ ದಾಳಿಯಿಂದ ಲಷ್ಕರ್ ಸಂಘಟನೆಗೆ ಅಪಾರವಾದ ನಷ್ಟವಾಗಿದ್ದು, ಸುಮಾರು 20 ಕ್ಕೂ ಹೆಚ್ಚು ಉಗ್ರರು ಹತ್ಯೆಯಾಗಿದ್ದಾರೆ ಎಂದು ಸೇನೆಯ ನಿರ್ಧರಿತ ವರದಿಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.