ಯಾವ ಕೋರ್ಟ್ ಹೇಳಿದರೂ ನೀರು ಬಿಡುವುದಿಲ್ಲ

Published : Oct 09, 2016, 01:33 PM ISTUpdated : Apr 11, 2018, 01:02 PM IST
ಯಾವ ಕೋರ್ಟ್ ಹೇಳಿದರೂ ನೀರು ಬಿಡುವುದಿಲ್ಲ

ಸಾರಾಂಶ

ಬೆಂಗಳೂರು, ಮೈಸೂರು, ಹಾಸನ, ತುಮಕೂರು ಹಾಗೂ ಈ ಭಾಗಗಳಲ್ಲಿನ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲು 24 ಟಿಎಂಸಿ ನೀರಿನ ಅಗತ್ಯವಿದೆ. ಅಷ್ಟುನೀರನ್ನು ಉಳಿಸಿಕೊಂಡು, ಅದಕ್ಕಿಂತ ಹೆಚ್ಚಿನ ನೀರಿದ್ದರೆ ತಮಿಳನಾಡಿಗೆ ಹರಿಸಲಾಗುವುದು

ಬೆಂಗಳೂರು(ಅ.9): ಕುಡಿಯುವ ನೀರಿಗೆ ಕೊರತೆಯಾದರೆ ಯಾವ ಕೋರ್ಟ್‌ ಹೇಳಿದರೂ ತಮಿಳುನಾಡಿಗೆ ನೀರು ಹರಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜತೆ ಶನಿವಾರ ಮಾತನಾಡಿ, ಬೆಂಗಳೂರು, ಮೈಸೂರು, ಹಾಸನ, ತುಮಕೂರು ಹಾಗೂ ಈ ಭಾಗಗಳಲ್ಲಿನ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲು 24 ಟಿಎಂಸಿ ನೀರಿನ ಅಗತ್ಯವಿದೆ. ಅಷ್ಟುನೀರನ್ನು ಉಳಿಸಿಕೊಂಡು, ಅದಕ್ಕಿಂತ ಹೆಚ್ಚಿನ ನೀರಿದ್ದರೆ ತಮಿಳನಾಡಿಗೆ ಹರಿಸಲಾಗುವುದು. ಏಕೆಂದರೆ ಕುಡಿವ ನೀರು ಮನುಷ್ಯರಿಗೆ ಅತ್ಯಂತ ಅವಶ್ಯ. ಅದು ಅವರ ಮೂಲಭೂತ ಹಕ್ಕು ಸಹ ಎಂದರು.
ನಮಗೆ ಕುಡಿಯಲು ನೀರಿಲ್ಲದಿದ್ದರೆ ಯಾವುದೇ ಕೋರ್ಟ್‌ ಆದೇಶ ಮಾಡಿದರೂ ನೀರು ಬಿಡದಿರುವುದೇ ಸರ್ಕಾರದ ನಿಲುವಾಗಿರುತ್ತದೆ. ಈ ಹಿಂದೆ ಈ ರೀತಿಯ ನಿರ್ಧಾರವನ್ನು ಯಾವುದೇ ಸರ್ಕಾರವೂ ತೆಗೆದು ಕೊಂಡಿ ರಲಿಲ್ಲ. ಯಾರು ನಾಗರಿಕರ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಬೇಕು ಎಂದು ತಿಳಿಸಿದರು. 
ರಾಜ್ಯದಲ್ಲಿ 2ನೇ ವರ್ಷವೂ ಬರಗಾಲ ಮುಂದುವರಿ​ದಿ​ರು​ವು​ದು ಹಾಗೂ ಕಾವೇರಿ ಸಂಕಷ್ಟದಿಂದ ದಸರಾ​ವನ್ನು ವಿಜೃಂಭಣೆಯಿಂದ ಆಚರಿಸುವ ಬದಲು ಸಾಂಪ್ರದಾಯಿಕ​ವಾಗಿ ಆಚ​ರಿಸಲಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಹಾರಾಷ್ಟ್ರದಲ್ಲಿ ಬಿಜೆಪಿ ಗೆದ್ದರೂ ಸೂರ್ಯವಂಶಿ ಕುಟುಂಬಕ್ಕೆ ಅಘಾತ, ಆರಕ್ಕೆ 6 ಸದಸ್ಯರಿಗೆ ಸೋಲು
ಬಿಡದಿ ಟೌನ್ ಶಿಪ್ ಜಿದ್ದಿನಿಂದ ಅನುಷ್ಠಾನ ಮಾಡುತ್ತಿಲ್ಲ: ಶಾಸಕ ಎಚ್.ಸಿ.ಬಾಲಕೃಷ್ಣ