ಗುರು ಗಂಭೀರ್​​​ಗೆ ಬೆಂಚ್​​ ಕಾಯಿಸಿದ ಶಿಷ್ಯ ಕೊಹ್ಲಿ, ನಂಬಿಕೆ ಉಳಿಸಿಕೊಳ್ಳದ ಸ್ನೇಹಿತ ಶಿಖರ್

By Internet DeskFirst Published Sep 30, 2016, 6:45 AM IST
Highlights

ಕೊಲ್ಕತ್ತಾ(ಸೆ.30): ಟೀಮ್ ಇಂಡಿಯದಿಂದ ಹಲವು ದಿನಗಳಿಂದ ದೂರ ಉಳಿದ್ದಿದ್ದ ಗುರು ಗಂಭೀರ್​​​ಗೆ ಸ್ಥಾನ ನೀಡುವುದೋ, ಇಲ್ಲ ಸ್ನೇಹಿತ ಶಿಖರ್'ಗೆ ಅವಕಾಶ ಕೊಡುವುದೋ ಎಂಬ ಗೊಂದಲದಲ್ಲಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳಲು ವಿಫಲರಾಗಿದ್ದಾರೆ. 

ಎಲ್ಲರೂ ಆಶ್ಚರ್ಯಕ್ಕೊಳಗಾಗುವಂತೆ ಗಂಭೀರ್ ಬದಲು ಸ್ಥಾನ ಅಂತಿಮ 11ರೊಳಗೆ ಸೇರಿಕೊಂಡಿದ್ದ ಶಿಖರ್​​​ ನಾಯಕನ ನಂಬಿಕೆಯನ್ನು ಉಳಿಸಿಕೊಳ್ಳಲಿಲ್ಲ. ಹೌದು, ಕೊಹ್ಲಿ ಲೆಕ್ಕಾಚಾರವನ್ನು ಧವನ್​ ಉಲ್ಟಾ ಮಾಡಿದ್ದಾರೆ. ಹೊಸ ಬಾಲ್​ ಎದುರಿಸುವಲ್ಲಿ ವಿಫಲರಾದ ಅವರು, ದೊಡ್ಡ ಓಪನಿಂಗ್​​ ಇರಲಿ ಸಾಧಾರಣ ಆರಂಭವನ್ನೂ ತಂಡಕ್ಕೆ ತಂದ್ಕೊಡಲಿಲ್ಲ. ಕೇವಲ 1 ರನ್​​ಗಳಿಗೆ ನಿರ್ಗಮಿಸಿದರು.  

Latest Videos

ಗಂಭೀರ್​​​ಗೆ ಬೆಂಚ್​​ ಕಾಯಿಸಿದ ಕೊಹ್ಲಿ ! 
ಗಂಭೀರ್​​​ ಬೆಂಚ್​​​ ಕಾಯುವಂತೆ ಮಾಡಿದ್ದು ವಿರಾಟ್​​​. ರಾಹುಲ್​ ಗಾಯಾಳುವಾಗ್ತಿದ್ದಾಗೆಯೇ ಕೋಚ್​​ ಅನಿಲ್​​ ಕುಂಬ್ಳೆ ಸಲಹೆ ಮೇರೆಗೆ ಬಿಸಿಸಿಐ ಗೌತಿಗೆ ಬುಲಾವ್​​ ನೀಡಿತ್ತು.

ಮತ್ತೋರ್ವ ಆರಂಭಿಕ ಶಿಖರ್​​ ಧವನ್​​ ಅದಾಗಲೇ ತಂಡದಲ್ಲಿದ್ದರೂ ಗಂಭೀರ್​​​ಗೆ 2 ವರ್ಷಗಳ ಬಳಿಕ ತಂಡದಲ್ಲಿ ಸ್ಥಾನ ಕಲ್ಪಿಸಿಕೊಟ್ಟಿದ್ದರು ಕೊಹ್ಲಿ ಗೌತಿಯನ್ನು ತಂಡದಲ್ಲಿ ಸೇರಿಸಿಕೊಳ್ಳದೆ ತಪ್ಪು ಮಾಡಿದ್ದಾರೆ. 

ದೇಸಿ ಟೂರ್ನಿಗಳಲ್ಲಿ ಭರ್ಜರಿ ಬ್ಯಾಟಿಂಗ್​​ ಮಾಡಿದ್ದ ಗಂಭೀರ್, ದುಲೀಪ್​​ ಟ್ರೋಫಿಯಲ್ಲಿಯೂ ಮಿಂಚಿದ್ದರು. ಅದ್ಭುತ ಫಾರ್ಮ್​​ನಲ್ಲಿದ್ದ ಅವ್ರ ಲಯಬದ್ಧವಾದ ಆಟ ತಂಡಕ್ಕೆ ಉಪಯೋಗವಾಗಲಿ ಅನ್ನೋದು ಎಲ್ಲರ ಆಲೋಚನೆಯಾಗಿತ್ತು. ಆದ್ರೆ, ವಿರಾಟ್​​​ ಮಾತ್ರ ಇದನ್ನು ನಿರ್ಲಕ್ಷಿಸಿ ತಪ್ಪು ಮಾಡಿದ್ದಾರೆ.  


 

click me!