ನಿರುದ್ಯೋಗದಿಂದ ಅಶಾಂತಿ ಹೆಚ್ಚಲಿದೆ

Published : Dec 14, 2016, 07:30 AM ISTUpdated : Apr 11, 2018, 12:43 PM IST
ನಿರುದ್ಯೋಗದಿಂದ ಅಶಾಂತಿ ಹೆಚ್ಚಲಿದೆ

ಸಾರಾಂಶ

'ಯುವಕರು ದೇಶದ ಆಸ್ತಿಯಿದ್ದಂತೆ ಆದರೆ, ಬಹುತೇಕ ಕಾಲೇಜು ಹಾಗೂ ವಿವಿಗಳಿಂದ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು ನಿರುದ್ಯೋಗಿಗಳಾಗುತ್ತಿದ್ದಾರೆ’ ಎಂದು ವಿಷಾದಿಸಿದ್ದಾರೆ.

ಚಿಂದ್ವಾರ (ಡಿ.14): ಭಾರತದಲ್ಲಿ ಯುವಕರು ನಿರುದ್ಯೋಗಿಗಳಾಗಿ ಹೀಗೆ ಮುಂದವರಿದರೆ ‘ಅಶಾಂತಿ ಹಾಗೂ ಹತಾಶೆ’ ಹೆಚ್ಚಾಗಲಿದೆ. ಆದ್ದರಿಂದ ಯುವಕರಿಗೆ ಕೌಶಲ್ಯಯುತ ಕೆಲಸಗಳನ್ನು ಕಲಿಸುವಲ್ಲಿ ಹೆಚ್ಚಿನ ಗಮನ ನೀಡಬೇಕು ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಭಿಪ್ರಾಯಪಟ್ಟಿದ್ದಾರೆ.

ಅಂಕ ಗಳಿಸಿರುವ ಆಧಾರದ ಮೇಲೆ ಉದ್ಯೋಗ ನೀಡುವುದಕ್ಕಿಂತ, ಕೌಶಲ್ಯದ ಆಧಾರದ ಮೇಲೆ ಯುವಕರಿಗೆ ಉದ್ಯೋಗ ನೀಡುವುದು ಒಳಿತು ಎಂದು ಮುಖರ್ಜಿ ಅಭಿಪ್ರಾಯಪಟ್ಟಿದ್ದಾರೆ.

'ಯುವಕರು ದೇಶದ ಆಸ್ತಿಯಿದ್ದಂತೆ ಆದರೆ, ಬಹುತೇಕ ಕಾಲೇಜು ಹಾಗೂ ವಿವಿಗಳಿಂದ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು ನಿರುದ್ಯೋಗಿಗಳಾಗುತ್ತಿದ್ದಾರೆ’ ಎಂದು ವಿಷಾದಿಸಿದ್ದಾರೆ.

ಭಾರತವು ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ, ಇದರಲ್ಲಿ ಸುಮಾರು ಅರ್ಧದಷ್ಟು ಜನರು 25ವರ್ಷದೊಳಗಿನವರೇ. ಇದೇರೀತಿ ಮುಂದುವರೆದರೆ ಮುಂದಿನ ವರ್ಷಗಳಲ್ಲಿ ದೇಶ ಬಹುದೊಡ್ಡ ಸವಾಲನ್ನು ಎದುರಿಸಲಿದೆ ಎಂದು ಎಚ್ಚರಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಿರುದ್ಯೋಗದ ಭೀತಿ,ಇಂಜಿನಿಯರಿಂಗ್‌ ಕೋರ್ಸ್‌ಗಳಲ್ಲಿ ಕಂಪ್ಯೂಟರ್‌ ಸೈನ್ಸ್‌ ಸೀಟ್‌ಗಳಿಗೆ ಇನ್ನು ಮಿತಿ!
ಬೆಂಗಳೂರು ವಿವಿ ಫಲಿತಾಂಶ: ಫೇಲಾಗಿದ್ದ 400 ವಿದ್ಯಾರ್ಥಿಗಳೂ ಪಾಸ್!