ಅಪ್ಪ – ಮಕ್ಕಳಿಗೆ ರಾಹುಲ್ ಟಿಕೆಟ್ ಕೊಡುತ್ತಾರಾ..? ಮಕ್ಕಳಿಗೆ ಟಿಕೆಟ್ ಕೇಳಿದ್ಯಾರು..?

Published : Jan 16, 2018, 12:59 PM ISTUpdated : Apr 11, 2018, 12:57 PM IST
ಅಪ್ಪ – ಮಕ್ಕಳಿಗೆ ರಾಹುಲ್ ಟಿಕೆಟ್ ಕೊಡುತ್ತಾರಾ..? ಮಕ್ಕಳಿಗೆ ಟಿಕೆಟ್ ಕೇಳಿದ್ಯಾರು..?

ಸಾರಾಂಶ

ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಹಿಡಿದು ಬಹುತೇಕ ಎಲ್ಲಾ ಹಿರಿಯ ಕಾಂಗ್ರೆಸ್ ನಾಯಕರು ತಮ್ಮ ಮಗ ಅಥವಾ ಮಗಳಿಗೆ ಟಿಕೆಟ್ ಕೇಳುತ್ತಿದ್ದಾರೆ. ಆದರೆ ಹೈಕಮಾಂಡ್ ಮೂಲಗಳು ಹೇಳುತ್ತಿರುವ ಪ್ರಕಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೀಗೆ ಸಾರಾಸಗಟಾಗಿ ಅಪ್ಪ ಮಕ್ಕಳಿಗೆ ಅಕ್ಕಪಕ್ಕದಲ್ಲಿಯೇ ಟಿಕೆಟ್ ನೀಡೋದು ಕಷ್ಟವಂತೆ.

ಬೆಂಗಳೂರ (ಜ.16): ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಹಿಡಿದು ಬಹುತೇಕ ಎಲ್ಲಾ ಹಿರಿಯ ಕಾಂಗ್ರೆಸ್ ನಾಯಕರು ತಮ್ಮ ಮಗ ಅಥವಾ ಮಗಳಿಗೆ ಟಿಕೆಟ್ ಕೇಳುತ್ತಿದ್ದಾರೆ. ಆದರೆ ಹೈಕಮಾಂಡ್ ಮೂಲಗಳು ಹೇಳುತ್ತಿರುವ ಪ್ರಕಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೀಗೆ ಸಾರಾಸಗಟಾಗಿ ಅಪ್ಪ ಮಕ್ಕಳಿಗೆ ಅಕ್ಕಪಕ್ಕದಲ್ಲಿಯೇ ಟಿಕೆಟ್ ನೀಡೋದು ಕಷ್ಟವಂತೆ.

ಹೀಗಾಗಿ ನೇರವಾಗಿ ಮಕ್ಕಳಿಗೆ ಟಿಕೆಟ್ ಕೊಡಿ ಎಂದು ಕೇಳಿದ ಒಬ್ಬ ಹಿರಿಯ ನಾಯಕರಿಗೆ ರಾಹುಲ್ ಆಪ್ತರೊಬ್ಬರು ‘ಪಕ್ಷ ಈ ಬಗ್ಗೆ ಪಾಲಿಸಿ ನಿರ್ಣಯ ತೆಗೆದುಕೊಳ್ಳುತ್ತದೆ. ಅಕ್ಕ ಪಕ್ಕದಲ್ಲಿ ತಂದೆ ಮತ್ತು ಮಗ ಚುನಾವಣೆಗೆ ನಿಂತರೆ ಕಾರ್ಯಕರ್ತರು ಬೇಸರಗೊಳ್ಳಬಹುದು. ನೋಡೋಣ, ಗೆಲ್ಲೋದು ಮುಖ್ಯ’ ಎಂದು ಹೇಳಿ ಕಳುಹಿಸಿದ್ದಾರೆ. ದೇವೇಗೌಡರು ಮಗನಿಗೆ ಪ್ರಾತಿನಿಧ್ಯ ಕೊಡುತ್ತಿದ್ದಾರೆ ಎಂದು ಜೆಡಿಎಸ್ ಬಿಟ್ಟು ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಎಚ್‌ಸಿ ಮಹಾದೇವಪ್ಪ ತಮ್ಮ ಕ್ಷೇತ್ರಗಳಾದ ವರುಣ ಮತ್ತು ಟಿ.ನರಸೀಪುರ ಕ್ಷೇತ್ರಗಳನ್ನು ಮಕ್ಕಳಿಗೆ ಬಿಟ್ಟು ತಾವು ಬೇರೆ ಕಡೆ ನಿಲ್ಲುವುದಾಗಿ ಈಗಾಗಲೇ ಹೇಳಿಬಿಟ್ಟಿದ್ದಾರೆ.

ಇನ್ನು ಗೃಹ ಸಚಿವ ರಾಮಲಿಂಗಾರೆಡ್ಡಿ ತನಗೆ ಬಿಟಿಎಂ ಲೇಔಟ್ ಮತ್ತು ಮಗಳಿಗೆ ಜಯನಗರದಿಂದ, ಇನ್ನೊಬ್ಬ ಹಿರಿಯ ಸಚಿವ ಟಿ ಬಿ ಜಯಚಂದ್ರ ತನಗೆ ಶಿರಾದಿಂದ, ಮಗನಿಗೆ ಪಕ್ಕದ ಚಿಕ್ಕನಾಯಕನ ಹಳ್ಳಿಯಿಂದ ಟಿಕೆಟ್ ಕೇಳುತ್ತಿದ್ದಾರೆ. ಸಂಸದ ಕೆ.ಎಚ್ ಮುನಿಯಪ್ಪ ತನ್ನದೇ ಲೋಕಸಭಾ ಕ್ಷೇತ್ರದಲ್ಲಿ ಮಗಳಿಗೆ ಟಿಕೆಟ್ ಕೊಡಬೇಕೆಂದು ದೆಹಲಿಯಲ್ಲಿ ಸಾಕಷ್ಟು ಬಾರಿ ನಾಯಕರಿಗೆ ದಂಡವತ್ ಹಾಕುತ್ತಿದ್ದಾರೆ. ಇನ್ನು ರೋಷನ್ ಬೇಗ್ ಕೂಡ ಹೇಗೂ ರೆಹಮಾನ್ ಖಾನ್ ಸೀಟ್ ಖಾಲಿಯಾಗುತ್ತಿದೆ, ಮಗನಿಗೆ ಶಿವಾಜಿ ನಗರದಿಂದ ಕೊಡಿ. ನನ್ನನ್ನು ರಾಜ್ಯಸಭೆಗೆ ಕಳುಹಿಸಿ ಎಂದು ಗುಲಾಂ ನಬಿ ಮತ್ತು ಅಹ್ಮದ್ ಪಟೇಲ್ ಬಳಿ ಹೇಳಿ ಹೋಗಿದ್ದಾರೆ.

ಇನ್ನೂ ಒಂದು ಆಶ್ಚರ್ಯ ಎಂದರೆ ಶಾಸಕ ಹ್ಯಾರಿಸ್ ಕೂಡ ತನ್ನ ಮಗನಿಗೆ ಟಿಕೆಟ್ ಕೇಳಬಹುದು ಎಂದು ಮಲೆಯಾಳಿ ಲಾಬಿ ಹೇಳುತ್ತಿದ್ದು, ಅಪ್ಪ ಮಕ್ಕಳ ದೊಡ್ಡ ಪಟ್ಟಿಯೇ ಹೈಕಮಾಂಡ್ ಮುಂದಿದೆ. ಹೈಕಮಾಂಡ್ ಮೂಲಗಳು ಹೇಳುತ್ತಿರುವ ಪ್ರಕಾರ, ಇಂಥ ಕ್ಷೇತ್ರಗಳ ಬಗ್ಗೆ ಅಂತಿಮವಾಗಿ ರಾಹುಲ್ ಗಾಂಧಿಯೇ ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ. ವಿಪರ್ಯಾಸ ಎಂದರೆ ಸ್ವತಃ ರಾಹುಲ್ ಗಾಂಧಿ ಕೂಡ ತನ್ನ ತಾಯಿಯ ಕ್ಷೇತ್ರ ರಾಯ್ ಬರೇಲಿ ಪಕ್ಕದ ಅಮೇಥಿಯಿಂದಲೇ ರಾಜಕಾರಣಕ್ಕೆ ಬಂದವರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೇಂದ್ರ, ಮೋದಿ ಮಾಡಿದ್ದೆಲ್ಲ ತಪ್ಪು ಎನ್ನಲಾಗದು, Vote Chori ಆರೋಪದಿಂದ ಕಾಂಗ್ರೆಸ್‌ನ ನೈತಿಕತೆ ಕುಸಿತ!
ಪ್ರಧಾನಿ ಮೋದಿ ಸಮಾಧಿ ಉದ್ಘೋಷದ ವಿರುದ್ಧ ಸಂಸತ್ತಲ್ಲಿ ಗದ್ದಲ: ಕ್ಷಮೆಗೆ ಆಗ್ರಹ