
ದೇಶದ ಮೊಟ್ಟ ಮೊದಲ ಡಿಜಿಪಿ ಕಾಂಚನ್ ಚೌಧರಿ ಭಟ್ಟಾಚಾರ್ಯ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ 72ರ ಹರೆಯದ ಕಾಂಚನ್ ಚೌಧರಿ ಸೋಮವಾರ ತಡರಾತ್ರಿ ಮುಂಬೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
1973ನೇ ಸಾಲಿನ IPS ಅಧಿಕಾರಿಯಾಗಿದ್ದ ಕಾಂಚನ್ ಚೌಧರಿ, ದೇಶದ ಎರಡನೇ ಮಹಿಳಾ IPS ಅಧಿಕಾರಿ. ಇನ್ನು 2004ರಲ್ಲಿ ಉತ್ತರಾಖಂಡ್ ನ ಡಿಜಿಪಿಯಾಗಿ ನೇಮಕವಾಗಿದ್ದ ಕಾಂಚನ್, ದೇಶದ ಮೊಟ್ಟ ಮೊದಲ ಮಹಿಳಾ ಡಿಜಿಪಿ ಎಂಬ ಖ್ಯಾತಿ ಗಳಿಸಿದ್ದರು. ಇದಾದ ಮೂರು ವರ್ಷಗಳಲ್ಲಿ ಅಂದರೆ 2007ರ ಅಕ್ಟೋಬರ್ 31ರಂದು ಅವರು ನಿವೃತ್ತರಾಗಿದ್ದರು. ಎಂಬ ಪ್ರಸಿದ್ಧಿಯೂ ಇವರದ್ದಾಗಿದೆ.
ನಿವೃತ್ತಿ ಬಳಿಕ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟ ಕಾಂಚನ್, 2014ರ ಲೋಕಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಹರಿದ್ವಾರ ಕ್ಷೇತ್ರದಿಂದ ಕಣಕ್ಕಿಳಿದರು. ಆದರೆ ಈ ಅದೃಷ್ಟ ಪರೀಕ್ಷೆಯಲ್ಲಿ ವಿಫಲರಾದರು.
ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರೀವಾಲ್ ಟ್ವೀಟ್ ಮೂಲಕ ಕಾಂಚನ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಟ್ವೀಟ್ ಮಾಡಿರುವ ಕೇಜ್ರೀವಾಲ್ 'ದೇಶದ ಮೊದಲ ಮಹಿಳಾ DGP ಕಾಂಚನ್ ಚೌಧರಿ ಭಟ್ಟಾಚಾರ್ಯ ನಿಧನದಿಂದ ದುಃಖವಾಗಿದೆ. ನಿವೃತ್ತಿ ಬಳಿಕ ಸಾಮಾಜಿಕ ಜೀವನದಲ್ಲಿ ಅತ್ಯಂತ ಚುರುಕಾಗಿದ್ದ ಕಾಂಚನ್, ತಮ್ಮ ಜೀವನದ ಅಂತಿಮ ಕ್ಷಣದವರೆಗೂ ದೇಶದ ಸೇವೆ ಮಾಡಲಿಚ್ಛಿಸಿದ್ದರು. ನಿಮ್ಮ ಅಗಲುವಿಕೆ ತೀವ್ರವಾಗಿ ಕಾಡಲಿದೆ, ಚಿರಶಾಂತಿ' ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.