ಜಾಧವ್ ಎಲ್ಲಿದ್ದಾರೆ, ಯಾವ ಸ್ಥಿತಿಯಲ್ಲಿದ್ದಾರೆ ಮಾಹಿತಿ ಸಿಗುತ್ತಿಲ್ಲ: ವಿದೇಶಾಂಗ ಇಲಾಖೆ

Published : Apr 13, 2017, 11:08 AM ISTUpdated : Apr 11, 2018, 12:49 PM IST
ಜಾಧವ್ ಎಲ್ಲಿದ್ದಾರೆ, ಯಾವ ಸ್ಥಿತಿಯಲ್ಲಿದ್ದಾರೆ ಮಾಹಿತಿ ಸಿಗುತ್ತಿಲ್ಲ: ವಿದೇಶಾಂಗ ಇಲಾಖೆ

ಸಾರಾಂಶ

ಭಾರತದ ಮಾಜಿ ಯೋಧ ಕುಲಭೂಷಣ್ ಜಾಧವ್ ಎಲ್ಲಿದ್ದಾರೆ, ಯಾವ ಸ್ಥಿತಿಯಲ್ಲಿದ್ದಾರೆ ಎನ್ನುವುದರ ಬಗ್ಗೆ ಪಾಕಿಸ್ತಾನ ಭಾರತದ ಜೊತೆ ಸಂವಹನ ನಡೆಸಿಲ್ಲ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಜಾಧವ್ ಯಾವುದೇ ಸ್ಥಿತಿಯಲ್ಲಿದ್ದರೂ ಭಾರತದ ರಾಯಭಾರಿಗಳನ್ನು ಸಂಪರ್ಕಿಸಲು ಅವಕಾಶ ನೀಡಬೇಕಿತ್ತು. ಆದರೆ ಪಾಕಿಸ್ತಾನ ರಾಯಭಾರಿ ಸಂಪರ್ಕಿಸಲು ಕೂಡಾ ನಿರಾಕರಿಸಿದೆ ಎಂದು ವಿದೇಶಾಂಗ ವಕ್ತಾರ ತಿಳಿಸಿದ್ದಾರೆ.

ನವದೆಹಲಿ (ಏ.13): ಭಾರತದ ಮಾಜಿ ಯೋಧ ಕುಲಭೂಷಣ್ ಜಾಧವ್ ಎಲ್ಲಿದ್ದಾರೆ, ಯಾವ ಸ್ಥಿತಿಯಲ್ಲಿದ್ದಾರೆ ಎನ್ನುವುದರ ಬಗ್ಗೆ ಪಾಕಿಸ್ತಾನ ಭಾರತದ ಜೊತೆ ಸಂವಹನ ನಡೆಸಿಲ್ಲ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಜಾಧವ್ ಯಾವುದೇ ಸ್ಥಿತಿಯಲ್ಲಿದ್ದರೂ ಭಾರತದ ರಾಯಭಾರಿಗಳನ್ನು ಸಂಪರ್ಕಿಸಲು ಅವಕಾಶ ನೀಡಬೇಕಿತ್ತು. ಆದರೆ ಪಾಕಿಸ್ತಾನ ರಾಯಭಾರಿ ಸಂಪರ್ಕಿಸಲು ಕೂಡಾ ನಿರಾಕರಿಸಿದೆ ಎಂದು ವಿದೇಶಾಂಗ ವಕ್ತಾರ ತಿಳಿಸಿದ್ದಾರೆ.

ಜಾಧವ್ ಎಲ್ಲಿದ್ದಾರೆ, ಯಾವ ಸ್ಥಿತಿಯಲ್ಲಿದ್ದಾರೆ ಎನ್ನುವ ಸುಳಿವು ನಮಗೆ ಸಿಗುತ್ತಿಲ್ಲ. ಜಾಧವ್ ಇರಾನ್ ನಲ್ಲಿ ಸಣ್ಣ ಬ್ಯಸಿನೆಸ್ ನ್ನು ಹೊಂದಿದ್ದಾರೆ. ಅಲ್ಲಿಂದ ಅವರನ್ನು ಕಿಡ್ನಾಪ್ ಮಾಡಿರುವ ಸೂಚನೆಯಿದೆ. ಕಳೆದ ವರ್ಷ ಿರಾನ್ ಸರ್ಕಾರ ಈ ಬಗ್ಗೆ ಮಾಹಿತಿ ನೀಡಿತ್ತು. ಬಳಿಕ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ವಿದೇಶಾಂಗ ವಕ್ತಾರ ಗೋಪಾಲ್ ಬಾಗ್ಲೆ ಹೇಳಿದ್ದಾರೆ.

ಸಾಮಾನ್ಯವಾಗಿ ರಾಯಭಾರಿಯನ್ನು ಭೇಟಿ ಮಾಡಲು ಶೀಘ್ರವಾಗಿ ಅವಕಾಶ ನೀಡಲಾಗುತ್ತದೆ. ಆದರೆ ಪಾಕಿಸ್ತಾನ ಿದಕ್ಕೆ ನಿರಾಕರಿಸುತ್ತಿದೆ. ಇವರು ಪಾಕಿಸ್ತಾನಕ್ಕೆ ಹೇಗೆ ಹೋದರು ಎಂಬುದನ್ನು ಪರಿಶೀಲಿಸಬೇಕು. ಸದ್ಯಕ್ಕೆ ಅವರ ಉಪಸ್ಥಿತಿಯ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ.ಅವರನ್ನು ಭೇಟಿ ಮಾಡುವುದು ಅಂತರಾಷ್ಟ್ರೀಯ ಕಾನೂನಿನ ಒಂದು ಭಾಗವಾಗಿದೆ ಎಂದು ಬಾಗ್ಲೆ ಹೇಳಿದ್ದಾರೆ.

ಜಾಧವ್ ರವರು ಒಂದು ವೇಳೆ ಬೇಹುಗಾರಿಕಾ ಉದ್ದೇಶದಿಂದ ಹೋಗಿದ್ದರೆ ಭಾರತದ ಪಾಸ್ ಪೋರ್ಟ್ ತೆಗೆದುಕೊಂಡು ಹೋಗಬೇಕಿತ್ತು ಎಂದಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Darshan The Devil Movie: ಕಾಲವೇ ಸತ್ಯ ಹೇಳುತ್ತದೆ. ಸಮಯವೇ ಉತ್ತರಿಸುತ್ತದೆ-ಜೈಲಿನಿಂದಲೇ ದರ್ಶನ್‌ ಮೆಸೇಜ್
ಅಕ್ಕಿ ಅಕ್ರಮದಲ್ಲಿ ಬಿಜೆಪಿಯವರೇ ಶಾಮೀಲು: ಸಚಿವ ಪ್ರಿಯಾಂಕ್ ಖರ್ಗೆ