
ನವದೆಹಲಿ(ಏ.21): ಕಪ್ಪುಹಣದಾರರು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ(ಪಿಎಂಜಿಕೆವೈ)ಯಡಿ ತೆರಿಗೆ ಪಾವತಿ ಮತ್ತು ಠೇವಣಿಗಳ ವಿವರ ಘೋಷಣೆ ಗಡುವನ್ನು 10 ದಿನ ವಿಸ್ತರಿಸಿದೆ.
ಮೇ 10ರ ವರೆಗೆ ಈ ಯೋಜನೆಯಡಿ ಕಪ್ಪು ಹಣ ಹೊಂದಿರುವವರು ತಮ್ಮ ವಿವರ ಘೋಷಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈವರೆಗೆ ಇದರ ಗಡುವು ಏಪ್ರಿಲ್ 30ಕ್ಕೆ ಮುಗಿಯಬೇಕಿತ್ತು.
‘ಪಿಎಂಜಿಕೆವೈಯಡಿ ಆದಾಯ ವಿವರ ಘೋಷಿಸುವವರಿಗೆ ಸಿಬಿಡಿಟಿ ಮೇ 10ರ ವರೆಗೆ ಅವಕಾಶ ನೀಡಿ ದಿನಾಂಕ ವಿಸ್ತರಿಸಿದೆ. ಮಾ. 31ರೊಳಗೆ ತೆರಿಗೆ, ದಂಡ ಮತ್ತು ಹೆಚ್ಚುವರಿ ತೆರಿಗೆ ಪಾವತಿಸಿರುವ ಮತ್ತು ಠೇವಣಿ ಯೋಜನೆಯಡಿ ಏ. 30ರೊಳಗೆ ಠೇವಣಿಯಿರಿಸಿರುವ ಪ್ರಕರಣಗಳಿಗೆ ಇದು ಅನ್ವಯವಾಗುತ್ತದೆ’ ಎಂದು ಅಕೃತ ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.