ರಂಜಾನ್ ತಿಂಗಳಲ್ಲಿ ಮುಸ್ಲಿಮರಿಗೆ ಸಿಖ್ ವ್ಯಾಪಾರಿಯಿಂದ ವಿಶೇಷ ಆಫರ್!

Published : May 18, 2019, 05:36 PM ISTUpdated : May 19, 2019, 05:15 PM IST
ರಂಜಾನ್ ತಿಂಗಳಲ್ಲಿ ಮುಸ್ಲಿಮರಿಗೆ ಸಿಖ್ ವ್ಯಾಪಾರಿಯಿಂದ ವಿಶೇಷ ಆಫರ್!

ಸಾರಾಂಶ

ಶಾಂತಿ ಸ್ಥಾಪನೆಗಾಗಿ ಸಿಖ್ ವ್ಯಾಪಾರಿಯ ಸಾಮರಸ್ಯದ ಆಫರ್| ಮುಸ್ಲಿಂ ಗ್ರಾಹಕರಿಗೆ ಸಿಖ್ ವ್ಯಾಪಾರಿಯ ಅಂಗಡಿಯಲ್ಲಿ ಭಾರೀ ರಿಯಾಯ್ತಿ|

ಇಸ್ಲಮಾಬಾದ್[ಮೇ.18]: ಪಾಕಿಸ್ತಾನದ ಕಬಾಯಲಿ ಜಿಲ್ಲೆಯಲ್ಲಿ ಸಿಖ್ ವ್ಯಾಪಾರಿಯೊಬ್ಬರು ಅಶಾಂತಿ ಮೂಡಿರುವ ಪ್ರದೇಶದಲ್ಲಿ ಶಾಂತಿ ಹಾಗೂ ಸಾಮರಸ್ಯ ಮೂಡಿಸಲು ಪವಿತ್ರ ರಂಜಾನ್ ತಿಂಗಳಲ್ಲಿ ಮುಸ್ಲಿಂ ಗ್ರಾಹಕರಿಗೆ ವಿಶೇಷ ರಿಯಾಯ್ತಿ ನೀಡುತ್ತಿದ್ದಾರೆ.

ಖೈಬರ್ ಸಮೀಪದ ಜಮ್ರೂದ್ ನಲ್ಲಿ ತಮ್ಮ ವ್ಯಾಪಾರ ನಡೆಸುತ್ತಿರುವ ನಾರಂಜ್ ಸಿಂಗ್, ಸರ್ಕಾರ ನಿಗದಿಪಡಿಸಿರುವ ದರಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಅಗತ್ಯ ವಸ್ತುಗಳ ಮಾರಾಟ ಮಾಡುತ್ತಿದ್ದಾರೆ. ಖಾದ್ಯ ವಸ್ತುಗಳನ್ನು ಮೂಲ ಬೆಲೆಗಿಂತ 10 ರಿಂದ 30ರೂಪಾಯಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. 

ಇದು 'ಪರೋಪಕಾರ' ಎನ್ನುವ ಸಿಂಗ್ ಈ ಮೂಲಕ ಮುಸ್ಲಿಂ ಹಾಗೂ ಲ್ಪಸಂಖ್ಯಾತ ಸಿಖ್ ಸಮುದಾಯದ ನಡುವೆ ಶಾಂತಿ ಹಾಗೂ ಸಾಮರಸ್ಯ ಮೂಡಿಸಲು ಯತ್ನಿಸುತ್ತಿರುವುದಾಗಿ ತಿಳಿಸಿದ್ದಾರೆ. 

ಪ್ರಮುಖ ಸಿಖ್ ಧಾರ್ಮಿಕ ಮುಖಂಡ ಹಾಗೂ ಮಾನವಾಧಿಕಾರಿ ಕಾರ್ಯಕರ್ತ ಚರಣ್ ಜೀತ್ ಸಿಂಗ್ ರನ್ನು ಕಳೆದ 2018ರ ಮೇ ತಿಂಗಳಲ್ಲಿ ಖೈಬರ್ ಪ್ರಾಂತ್ಯದಲ್ಲಿ ಗುಮಡು ಹೊಡೆದು ಹತ್ಯೆಗೈಯ್ಯಲಾಗಿತ್ತು. ಇದಾದ ಬಳಿಕ ಧರ್ಮಗಳ ನಡುವಿನ ಹಿಂಸಾಚಾರ ಭುಗಿಲೆದ್ದಿತ್ತು.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!