ಫೆಬ್ರವರಿಯಲ್ಲಿ ಪ್ರಧಾನಿ ಮೋದಿಗೆ ಗಂಡಾಂತರ, ಪಾರಾದರೆ 12 ವರ್ಷ ಯಾರೂ ಏನೂ ಮಾಡಲು ಸಾಧ್ಯವಿಲ್ಲ: ಗುರೂಜಿ ನುಡಿದ ಭವಿಷ್ಯ

By Suvarna Web DeskFirst Published Dec 22, 2016, 12:44 AM IST
Highlights

ಫೆಬ್ರವರಿ ತಿಂಗಳಲ್ಲಿ ಪ್ರಧಾನಿ ಮೋದಿಯವರಿಗೆ ಗಂಡಾಂತರ ಕಾದಿದೆಯಾ? ಅವರ ಕುರ್ಚಿಗೆ ಕಂಟಕ ಇದೆಯಾ? ಈ ವಿಚಾರ ಪ್ರಧಾನಿ ಗಮನಕ್ಕೆ ಬಂದಿದೆಯಾ? ಹೌದು ಎನ್ನುತ್ತಾರೆ ಬ್ರಹ್ಮಾಂಡ ಖ್ಯಾತಿಯ ನರೇಂದ್ರ ಶಾರ್ಮಾ ಗುರೂಜಿ.

ತುಮಕೂರು(ಡಿ.22): ಫೆಬ್ರವರಿ ತಿಂಗಳಲ್ಲಿ ಪ್ರಧಾನಿ ಮೋದಿಯವರಿಗೆ ಗಂಡಾಂತರ ಕಾದಿದೆಯಾ? ಅವರ ಕುರ್ಚಿಗೆ ಕಂಟಕ ಇದೆಯಾ? ಈ ವಿಚಾರ ಪ್ರಧಾನಿ ಗಮನಕ್ಕೆ ಬಂದಿದೆಯಾ? ಹೌದು ಎನ್ನುತ್ತಾರೆ ಬ್ರಹ್ಮಾಂಡ ಖ್ಯಾತಿಯ ನರೇಂದ್ರ ಶಾರ್ಮಾ ಗುರೂಜಿ.

ತುಮಕೂರಿನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಪ್ರವಚನ ನೀಡುತ್ತಾ ಮಾತನಾಡಿದ ಅವರು, ಪ್ರಧಾನಿ ಮೋದಿಗೆ ಫೆಬ್ರವರಿ ತಿಂಗಳಲ್ಲಿ ಗಂಡಾಂತರ ಎದುರಾಗಲಿರುವುದು ಖಚಿತ. ಆ ಗಂಡಾಂತರದಿಂದ ಅವರು ಪಾರಾಗಬೇಕು. ಈ ಕಂಟಕದಿಂದ ಬಚಾವಾದರೆ ಇನ್ನು ಮುಂದಿನ 12 ವರ್ಷ ಅವರನ್ನು ಯಾರೂ ಅಲ್ಲಾಡಿಸಲು ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ. 

ಬ್ರಹ್ಮಾಂಡ ಗುರೂಜಿಯೆ ಈ ಗಂಡಾಂತರದ ಕುರಿತು ಸ್ವತಃ ಪ್ರಧಾನಿ ಅವರ ಗಮನಕ್ಕೆ ತಂದಿದ್ದಾರಂತೆ. ಮಾಘ ಮಾಸದಲ್ಲಿ ಎದುರಾಗುವ ಅಪವೃಷ್ಠಿ ಮೃತುಂಜಯ ಪರಿವರ್ತನೆಯಲ್ಲಿ ಮೋದಿ ಅವರಿಗೆ ತೊಂದರೆಯಿದೆ ಎಂದು ಪ್ರವಚನ ನೀಡಿರುವ ಈ ಗುರೂಜಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಕೂಡಾ ಇದೇ ಗಂಡಾಂತರದಿಂದ ಸಾವನಪ್ಪಿದ್ದು ಎಂದು ಹೇಳಿದ್ದಾರೆ.

click me!