
ಇಸ್ಲಾಮಾಬಾದ್ (ಮಾ. 10): ನಾಲ್ಕನೇ ಮದುವೆಯಾಗಿ ಭಾರತಕ್ಕೆ ಶಾಂತಿ ಸಂದೇಶ ಕಳುಹಿಸಲು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಗುಟ್ಟಾಗಿ ಸಿದ್ಧತೆ ನಡೆಸಿದ್ದಾರೆ.
ಈ ಬಾರಿ ಅವರು ಭಾರತೀಯ ಯುವತಿಯನ್ನೇ ಮದುವೆಯಾಗಲಿದ್ದು, ಭಾರತದ ಅಳಿಯನಾದ ಮೇಲೆ ಭಾರತ ತಮ್ಮ ದೇಶದ ಮೇಲೆ ದಾಳಿ ನಡೆಸದು ಎಂಬ ನಿರೀಕ್ಷೆ ಹೊಂದಿದ್ದಾರೆ. ಅಲ್ಲದೆ, ನಾಲ್ಕನೇ ಮದುವೆಯಾಗುವ ಮೂಲಕ ‘ನೊಂದ ಜೀವ, ಮತ್ತೆ ನೋಯಿಸಬೇಡಿ’ ಎಂದು ಎಮೋಷನಲ್ ಬ್ಲ್ಯಾಕ್ಮೇಲ್ ಮಾಡಲೂ ಸಂಚು ರೂಪಿಸಿದ್ದಾರೆ ಎನ್ನಲಾಗಿದೆ.
ಈಗಾಗಲೇ ಮೂವರನ್ನು ಮದುವೆಯಾಗಿ ಅವರು ಡೈವೊರ್ಸ್ ನೀಡಿದ್ದಾರೆ. ಭಾರತದ ಕಡೆಯಿಂದ ದಾಳಿ ನಡೆಸುವ ಭೀತಿಯಿರುವುದರಿಂದ ಅದನ್ನು ತಪ್ಪಿಸಿಕೊಳ್ಳಲು ಮದುವೆಯ ತಂತ್ರಕ್ಕೆ ಮೊರೆ ಹೋಗಿದ್ದಾರೆಂದು ಸುಳ್ಸುದ್ದಿ ಮೂಲಗಳು ಹೇಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.