ನಾನು ಯಾವುದೇ ಪಕ್ಷದವನಲ್ಲ ನಾನೊಬ್ಬ ಕಲಾವಿದನಷ್ಟೇ: ಪ್ರಕಾಶ್ ರೈ

Published : Feb 24, 2018, 08:59 PM ISTUpdated : Apr 11, 2018, 12:45 PM IST
ನಾನು ಯಾವುದೇ ಪಕ್ಷದವನಲ್ಲ ನಾನೊಬ್ಬ ಕಲಾವಿದನಷ್ಟೇ: ಪ್ರಕಾಶ್ ರೈ

ಸಾರಾಂಶ

ಸರ್ವಜನಾಂಗದ ಶಾಂತಿಯ ತೋಟವೆನಿಸಿರುವ ಕರ್ನಾಟಕದಲ್ಲಿ ಕೆಲವರು ಕೋಮು ಬೀಜಗಳನ್ನು ಬಿತ್ತುತಿದ್ದಾರೆ. ಇಂತವರ ಬಗ್ಗೆ ನೀವು ಎಚ್ಚರದಿಂದ ಇರಬೇಕು  ಇವರನ್ನು ಪ್ರಶ್ನಿಸುವ ಮನೋಭಾವನೆಯನ್ನು ಬೆಳಸಿಕೊಳ್ಳಬೇಕು ಎಂದು ಚಿಕ್ಕಬಳ್ಳಾಪುರದ ಕಾರ್ಯಕ್ರಮವೊಂದರಲ್ಲಿ ನಟ ಪ್ರಕಾಶ್ ರೈ ಹೇಳಿದ್ದಾರೆ. 

ಬೆಂಗಳೂರು (ಫೆ.24): ಸರ್ವಜನಾಂಗದ ಶಾಂತಿಯ ತೋಟವೆನಿಸಿರುವ ಕರ್ನಾಟಕದಲ್ಲಿ ಕೆಲವರು ಕೋಮು ಬೀಜಗಳನ್ನು ಬಿತ್ತುತಿದ್ದಾರೆ. ಇಂತವರ ಬಗ್ಗೆ ನೀವು ಎಚ್ಚರದಿಂದ ಇರಬೇಕು  ಇವರನ್ನು ಪ್ರಶ್ನಿಸುವ ಮನೋಭಾವನೆಯನ್ನು ಬೆಳಸಿಕೊಳ್ಳಬೇಕು ಎಂದು ಚಿಕ್ಕಬಳ್ಳಾಪುರದ ಕಾರ್ಯಕ್ರಮವೊಂದರಲ್ಲಿ ನಟ ಪ್ರಕಾಶ್ ರೈ ಹೇಳಿದ್ದಾರೆ. 

ಕೋಮು ಬೀಜಗಳನ್ನು ಬಿತ್ತುವವರನ್ನು ಪ್ರಶ್ನಿಸುವ ಕೆಲಸವನ್ನು ನಾನು ಮಾಡುತ್ತಿದ್ದೇನೆ.  ಹೀಗಾಗಿ ನನ್ನನ್ನು ಯಾವುದೋ ಒಂದು ಪಕ್ಷದ ಮೂಲಕ ಗುರುತಿಸುವ ಕೆಲಸ ನಡೆಯುತ್ತಿದೆ.  ಜಾತಿ, ಧರ್ಮಗಳ ಹೆಸರಿನಲ್ಲಿ ಗಲಭೆಗಳನ್ನು ಸೃಷ್ಟಿಸಿ ಯುವಕರನ್ನು ಜೈಲಿಗೆ ಕಳುಹಿಸಿ ಅವರು ನೆಮ್ಮದಿಯಾಗಿರುತ್ತಾರೆ.  ಆದರೆ ಈ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.  

ನಮ್ಮ ಹೆಂಡತಿ ಮಕ್ಕಳು ಬಸ್’ನಲ್ಲಿ ಓಡಾಡುವಾಗ ಯಾರು ಕಲ್ಲು ತೂರದ ರೀತಿ ಸಮಾಜವನ್ನು ಶಾಂತಿಯುತವಾಗಿ ಕಾಪಾಡಬೇಕಿದೆ.  ಇದನ್ನೇ ನಾನು ಮಾಡಲು ಹೊರಟಿದ್ದೇನೆ ಭೂಮಿಗೆ ಬೆಲೆ ಬಂದಿದೆ ಆದರೆ ರೈತರಿಗೆ,ಕೃಷಿಗೆ ಬೆಲೆ ಬಂದಿಲ್ಲ ಎಂದಿದ್ದಾರೆ. 

ನಾನು ಯಾವ ವೇದಿಕೆಗೆ ಹೋದರೂ ನನಗೆ ರಾಜಕೀಯ ಬಣ್ಣ ಬಳೆಯುತ್ತಿದ್ದಾರೆ.  ಆದರೆ ನಾನು ಯಾವುದೇ ಪಕ್ಷದವನಲ್ಲ ನಾನೊಬ್ಬ ಕಲಾವಿದನಷ್ಟೇ ಎಂದು ಪ್ರಕಾಶ್ ರೈ ಹೇಳಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು ಕೇಂದ್ರದಲ್ಲಿ ಏರ್‌ಟ್ಯಾಕ್ಸಿ ಪರೀಕ್ಷೆ ಆರಂಭಿಸಿದ ಸರ್ಲಾ ಏವಿಯೇಷನ್‌, 2028ಕ್ಕೆ ಲಾಂಚ್‌
ದುಬೈ ಮರುಭೂಮಿಯಲ್ಲಿ ನಿಗೂಢ ಜೀವಿ ಪತ್ತೆ: ಪ್ರವಾಸಿ ಮಹಿಳೆ ಹಂಚಿಕೊಂಡ ವಿಡಿಯೋ ಭಾರೀ ವೈರಲ್!