
ನವದೆಹಲಿ (ಅ.02): ಮಹಾತ್ಮ ಗಾಂಧೀಜಿಯವರ ಜನ್ಮದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ರಾಜ್’ಘಾಟ್’ಗೆ ತೆರಳಿ ಪುಷ್ಪ ನಮನ ಸಲ್ಲಿಸಿದರು.
ಬಾಪುರವರ ಜನ್ಮದಿನವಾದ ಇಂದು ನಾನವರಿಗೆ ತಲೆ ಬಾಗುತ್ತೇನೆ. ಅವರ ಉದಾತ್ತ ಆದರ್ಶಗಳು ಜಗತ್ತಿಗೆ ಪ್ರೇರೇಪಣೆ ನೀಡುತ್ತವೆ ಎಂದು ಮೋದಿ ಹೇಳಿದರು. ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರಾಜ್’ಘಾಟ್’ಗೆ ತೆರಳಿ ಪುಷ್ಪ ನಮನ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಸ್ವಚ್ಚ ಭಾರತದ ಬಗ್ಗೆ ಮಾತನಾಡುತ್ತಾ, ಸ್ವಚ್ಚ ಭಾರತವು 125 ಕೋಟಿ ಭಾರತೀಯರ ಅಭಿಯಾನ. ಇದು ಕೇವಲ ಅಧಿಕಾರಿಗಳ, ನಾಯಕರ ಅಭಿಯಾನವಲ್ಲ ಎಂದು ಮೋದಿ ಹೇಳಿದರು.
ಭಾರತ ಸಮಸ್ಯೆಗಳನ್ನು ಎದುರಿಸುತ್ತಿದೆ. ಹಾಗಂತ ನಾವು ಇದರಿಂದ ದೂರ ಓಡಿ ಹೋಗಲು ಆಗುವುದಿಲ್ಲ. ಅದನ್ನು ಎದುರಿಸಿ ಅದರಿಂದ ಹೊರ ಬರಲು ಕೆಲಸ ಮಾಡುತ್ತೇವೆ. ಸ್ವಚ್ಚ ಭಾರತಕ್ಕೆ ಎಲ್ಲರೂ ಕೈ ಜೋಡಿಸಬೇಕು. 1 ಸಾವಿರ ಮಹಾತ್ಮ ಗಾಂಧೀಜಿಯವರಿಂದ , 1 ಲಕ್ಷ ನರೇಂದ್ರ ಮೋದಿಯಿಂದ, ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಂದ ಮಾತ್ರ ಸಾಧ್ಯವಾಗುವುದಿಲ್ಲ. 125 ಕೋಟಿ ಭಾರತೀಯರಿಂದ ಮಾತ್ರ ಸಾಧ್ಯ ಎಂದು ಮೋದಿ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.