
ಬೆಂಗಳೂರು(ಆ.3): ಇದು ಇಡೀ ಕರ್ನಾಟಕದ ಜನತೆ ಹೆಮ್ಮೆ ಪಡುವ ಸುದ್ದಿ. ಕೊಡಗಿನ ಐಬಿ ಉತ್ತಯ್ಯ ಅವರು ನೌಕಾಪಡೆಯ ರಿಯರ್ ಅಡ್ಮಿರಲ್ ಹುದ್ದೆ ಅಲಂಕರಿಸಿದ್ದಾರೆ. ಉತ್ತಯ್ಯ ಈ ಸ್ಥಾನಕ್ಕೇರುತ್ತಿರುವ ಕೊಡಗು ಜಿಲ್ಲೆಯ ಪ್ರಥಮ ವ್ಯಕ್ತಿ ಎನ್ನುವುದು ಗಮನಾರ್ಹ.
ಕೊಡಗಿನ ಮಕ್ಕಂದೂರಿನವರಾದ ಉತ್ತಯ್ಯ, ದಿ. ಬೆಳ್ಯಪ್ಪ ಅವರ ಪುತ್ರ. ರಿಯರ್ ಅಡ್ಮಿರಲ್ ಎನ್ನುವುದು ಭೂಸೇನೆಯಲ್ಲಿ ಮೇಜರ್ ಜನರಲ್ ಹುದ್ದೆಗೆ ಸರಿಸಮನಾದ ಹುದ್ದೆಯಾಗಿದೆ.
1984 ರಲ್ಲಿ ಭಾರತೀಯ ನೌಕಾಪಡೆಗೆ ಸೇರಿದ್ದ ಉತ್ತಯ್ಯ, ಬಿ.ಟೆಕ್, ಎಂ.ಟೆಕ್ ಹಾಗೂ ಎಂ.ಫಿಲ್ ಪದವೀಧರರು. ಇದಕ್ಕೂ ಮುನ್ನ ನೌಕಾಪಡೆಯಲ್ಲಿ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದ ಇವರಿಗೆ ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿ ಇದ್ದಾರೆ. ಉತ್ತಯ್ಯ ದೆಹಲಿಯಲ್ಲಿ ನೆಲೆಯಾಗಿದ್ದರೆ ಅವರ ಕುಟುಂಬ ಬೆಂಗಳೂರಿನಲ್ಲಿ ವಾಸವಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.