ಕಾರ್ಗಿಲ್ ಯುದ್ಧದ ವೇಳೆ ಪಾಕ್ ಪ್ರಧಾನಿ ಷರೀಫ್, ಮುಷರಫ್ ಸ್ವಲ್ಪದರಲ್ಲೇ ಪಾರು!

Published : Jul 25, 2017, 12:54 AM ISTUpdated : Apr 11, 2018, 01:12 PM IST
ಕಾರ್ಗಿಲ್ ಯುದ್ಧದ ವೇಳೆ ಪಾಕ್ ಪ್ರಧಾನಿ ಷರೀಫ್, ಮುಷರಫ್ ಸ್ವಲ್ಪದರಲ್ಲೇ ಪಾರು!

ಸಾರಾಂಶ

ಉನ್ನತ ಅಧಿಕಾರಿಯೊಬ್ಬರು ನಿರ್ದೇಶನದ ಮೇರೆಗೆ, ಬಾಂಬ್ ಹಾಕುವ ನಿರ್ಧಾರ ಪೈಲಟ್ ಕೈಬಿಟ್ಟರು. ಬಳಿಕ ಆ ಬಾಂಬ್ ಅನ್ನು ಗಡಿ ನಿಯಂತ್ರಣ ರೇಖೆ ಬಳಿ ಹಾಕಲಾಯಿತು ಎನ್ನಲಾಗಿದೆ.

ನವದೆಹಲಿ(ಜು.25): ಕಾರ್ಗಿಲ್ ಯುದ್ಧದ ಸಂದರ್ಭ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಮತ್ತು ಮಾಜಿ ಸೇನಾ ಮುಖ್ಯಸ್ಥ ಪರ್ವೇಜ್ ಮುಷರಫ್ ಸ್ವಲ್ಪದರಲ್ಲೇ ಭಾರತೀಯ ನೌಕಾ ಪಡೆಯ ದಾಳಿಯಿಂದ ಪಾರಾಗಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.

1999, ಜೂನ್ 24ರ ಮುಂಜಾನೆ 8.45ರ ವೇಳೆ ಭಾರತೀಯ ವಾಯು ಸೇನೆಯ ಯುದ್ಧ ವಿಮಾನ ‘ಜಾಗ್ವಾರ್’ ಷರೀಫ್ ಮತ್ತು ಮುಷರಫ್ ಇದ್ದ ಗುಲೆಟಿ ಸೇನಾ ನೆಲೆಯ ಮೇಲೆ ದಾಳಿ ನಡೆಸುವ ಸಾಧ್ಯತೆಯಿತ್ತು. ಜಾಗ್ವಾರ್‌ನ ಪೈಲಟ್ ಈ ನೆಲೆಯ ಮೇಲೆ ಬಾಂಬ್ ಹಾಕುವುದರಲ್ಲಿದ್ದರು. ಆದರೆ ಷರೀಫ್ ಮತ್ತು ಮುಷರಫ್ ಇದ್ದುದರಿಂದ ಸೇನಾ ನೆಲೆಯ ಮೇಲೆ ದಾಳಿ ನಡೆಸದಿರಲು ನಿರ್ಧರಿಸಿದ್ದರು ಎಂಬ ಮಾಹಿತಿಯುಳ್ಳ ದಾಖಲೆಯೊಂದರಿಂದ ಬಹಿರಂಗವಾಗಿದೆ.

ಉನ್ನತ ಅಧಿಕಾರಿಯೊಬ್ಬರು ನಿರ್ದೇಶನದ ಮೇರೆಗೆ, ಬಾಂಬ್ ಹಾಕುವ ನಿರ್ಧಾರ ಪೈಲಟ್ ಕೈಬಿಟ್ಟರು. ಬಳಿಕ ಆ ಬಾಂಬ್ ಅನ್ನು ಗಡಿ ನಿಯಂತ್ರಣ ರೇಖೆ ಬಳಿ ಹಾಕಲಾಯಿತು ಎನ್ನಲಾಗಿದೆ. ಕಾರ್ಗಿಲ್ ಯುದ್ಧದ ವೇಳೆ ಗುಲೆಟಿ, ಪಾಕಿಸ್ತಾನಿ ಯೋಧರಿಗೆ ಲಾಜಿಸ್ಟಿಕ್ ಬೆಂಬಲ ಒದಗಿಸುವ ಮತ್ತು ಆಡಳಿತಾತ್ಮಕ ನೆಲೆಯಾಗಿತ್ತು. ಷರೀಫ್ ಮತ್ತು ಮುಷರಫ್ ಮೊದಲ ಬಾರಿ ಅಲ್ಲಿಗೆ ಆಗಮಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Karunya Ram Sister Case: ಒಡಹುಟ್ಟಿದ ತಂಗಿ ವಿರುದ್ಧವೇ ಪೊಲೀಸ್‌ ಠಾಣೆ ಮೆಟ್ಟಿಲೇರಿದ ನಟಿ ಕಾರುಣ್ಯಾ ರಾಮ್
ಅಂತ್ಯಸಂಸ್ಕಾರದ ವೇಳೆ ಅಚ್ಚರಿ, ಚಿತೆಯಿಂದ ಎದ್ದು ಬಂದು ಬರ್ತ್‌ಡೇ ಆಚರಿಸಿದ 103ರ ಹರೆಯದ ಅಜ್ಜಿ