‘ಏನೇ ಆಗಲಿ, ನಾನು ಮೊಬೈಲ್ ನಂ.ಗೆ ಆಧಾರ್ ಲಿಂಕ್ ಮಾಡಲ್ಲ’ ಆಧಾರ್ ವಿರುದ್ಧ ಸಮರ ಸಾರಿದ ದೀದಿ

Published : Oct 25, 2017, 06:33 PM ISTUpdated : Apr 11, 2018, 12:43 PM IST
‘ಏನೇ ಆಗಲಿ, ನಾನು ಮೊಬೈಲ್ ನಂ.ಗೆ ಆಧಾರ್ ಲಿಂಕ್ ಮಾಡಲ್ಲ’ ಆಧಾರ್ ವಿರುದ್ಧ ಸಮರ ಸಾರಿದ ದೀದಿ

ಸಾರಾಂಶ

ಕೇಂದ್ರದ ನೀತಿಗಳ ವಿರುದ್ಧ ಹರಿಹಾಯುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದೀಗ ಆಧಾರ್ ಯೊಜನೆ ವಿರುದ್ಧ ಸಮರ ಸಾರಿದ್ದಾರೆ.

ನವದೆಹಲಿ: ಕೇಂದ್ರದ ನೀತಿಗಳ ವಿರುದ್ಧ ಹರಿಹಾಯುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದೀಗ ಆಧಾರ್ ಯೊಜನೆ ವಿರುದ್ಧ ಸಮರ ಸಾರಿದ್ದಾರೆ.

ಪಕ್ಷದ ಕಾರ್ಯಕಾರಿ ಸಮಿತಿಯಲ್ಲಿ ಮುಖಂಡರು ಹಾಗೂ ಕಾರ್ಯಕರ್ತರನ್ನುದ್ದೇಶಿ ಮಾತನಾಡಿದ ಮಮತಾ ಬ್ಯಾನರ್ಜಿ, ಕೇಂದ್ರ ಸರ್ಕಾರದ ಆಧಾರ್ ಕಡ್ಡಾಯಗೊಳಿಸುವಿಕೆಯ ವಿರುದ್ಧ ಹರಿಹಾಯ್ದಿದ್ದಾರೆ.

‘ಏನೇ ಆಗಲಿ, ನಾನು ಮೊಬೈಲ್ ಸಂಖ್ಯೆಯೊಂದಿಗೆ ಆಧಾರನ್ನು ಲಿಂಕ್ ಮಾಡಲ್ಲ; ಸಂಪರ್ಕ ಸ್ಥಗಿತಗೊಳಿಸಿದರೂ ಪರ್ವಾಗಿಲ್ಲ,’ ಎಂದು ಮಮತಾ ಘರ್ಜಿಸಿದ್ದಾರೆ.

ಮುಂದುವರಿದು, ಎಲ್ಲರೂ ಕೂಡಾ ಇದೇ ರೀತಿ (ಲಿಂಕ್ ಮಾಡಿಸದೇ) ಆಧಾರ್ ಕಡ್ಡಾಯಗೊಳಿಸುವಿಕೆಯ ವಿರುದ್ಧ ಪ್ರತಿಭಟನೆ ನಡೆಸಬೇಕೆಂದು ಕರೆಕೊಟ್ಟಿದ್ದಾರೆ.

ಮೊಬೈಲ್ ಸಂಖ್ಯೆಗೆ ಆಧಾರ್ ಲಿಂಕ್ ಮಾಡುವುದು ಖಾಸಗಿತನ ಹಕ್ಕಿನ ಉಲ್ಲಂಘನೆಯಾಗಿದೆ. ಇದು ಮುಂದುವರೆದರೆ, ಪತಿ-ಪತ್ನಿಯ ಖಾಸಗಿ ಸಂಭಾಷಣೆಗಳು ಕೂಡಾ ಸಾರ್ವಜನಿಕವಾಗಬಹುದು, ಎಂದು ದೀದಿ ಹೇಳಿದ್ದಾರೆ.

ಮೊಬೈಲ್ ಸಂ. ಆಧಾರ್ ಜೊತೆಗೆ ಲಿಂಕ್ ಮಾಡುವುದು ಕಡ್ಡಾಯವೆಂದು ಕಳೆದ ಮಾ.23ರಂದು ದೂರಸಂಪರ್ಕ ಇಲಾಖೆ ಆದೇಶ ಹೊರಡಿಸಿದೆ.   

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅನ್ಯ ಧರ್ಮಿಯ ಜೊತೆ ಮದುವೆ: ಪುತ್ರಿಗೆ ಅಪ್ಪನ ಆಸ್ತಿಯಲ್ಲಿ ಹಕ್ಕಿಲ್ಲ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ರಸಗೊಬ್ಬರ ಬಳಕೆ ಕಡಿಮೆ ಮಾಡಿ, ಮಣ್ಣಿನ ಆರೋಗ್ಯ ಕಾಪಾಡಿ: ಸಿಎಂ ಸಿದ್ದರಾಮಯ್ಯ ಸಲಹೆ