ರಾಜಕೀಯಕ್ಕೆ ಯದುವೀರ್, ಪ್ರಮೋದಾ ದೇವಿ ಏನಂದ್ರು?

Published : Sep 16, 2018, 02:59 PM ISTUpdated : Sep 19, 2018, 09:27 AM IST
ರಾಜಕೀಯಕ್ಕೆ ಯದುವೀರ್, ಪ್ರಮೋದಾ ದೇವಿ ಏನಂದ್ರು?

ಸಾರಾಂಶ

ಮೈಸೂರು ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ರಾಜಕೀಯ ಪ್ರವೇಶ ಮಾಡುತ್ತಾರೆ ಎಂಬ ಊಹಾಪೋಹಾಕ್ಕೆ ತೆರೆಬಿದ್ದಿದೆ. ಸ್ವತಃ ಪ್ರಮೋದಾ ದೇವಿ ಅವರೇ ತೆರೆ ಎಳೆದಿದ್ದಾರೆ. 

ಮೈಸೂರು, (ಸೆ.16):  ಮೈಸೂರು ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ರಾಜಕೀಯ ಪ್ರವೇಶ ಮಾಡುತ್ತಾರೆ ಎಂಬ ಊಹಾಪೋಹಾಕ್ಕೆ ತೆರೆಬಿದ್ದಿದೆ. ಸ್ವತಃ ಪ್ರಮೋದಾ ದೇವಿ ಅವರೇ ತೆರೆ ಎಳೆದಿದ್ದಾರೆ. 

ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಪ್ರಮೋದಾ ದೇವಿ, ಜನಸೇವೆ ಮಾಡಲು ರಾಜಕೀಯಕ್ಕೆ ಬರುವ ಅವಶ್ಯಕತೆ ಇಲ್ಲ. ಅಮಿತ್ ಶಾ ಚುನಾವಣೆ ಸಂದರ್ಭದ ಭೇಟಿ ಮುನ್ನ ತುಂಬಾ ಮಂದಿ ಭೇಟಿ ಮಾಡಿದ್ದರು. ಆದರೆ, ಯಾವುದೆ ಕಾರಣಕ್ಕೂ ರಾಜಕೀಯ ಪ್ರವೇಶ ಇಲ್ಲ ಎಂದು ಸ್ಪಷ್ಟಪಡಿಸಿದರು. ಇನ್ನು ಯದುವೀರ್ ರಾಜಕೀಯ ಪ್ರವೇಶ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಪ್ರಮೋದ ದೇವಿ, ಯದುವೀರ್ ರಾಜಕೀಯ ಸೇರಿರುವುದು ಅವರ ವೈಯಕ್ತಿಕ ವಿಚಾರ ಎಂದರು. 

ಸರ್ಕಾರ ಮಾಡುವುದು ದಸರಾ ಅಲ್ಲಾ ನಾಡಹಬ್ಬ. ನಾವು ಮಾಡುವುದು ದಸರಾ. ನವರಾತ್ರಿ ಹಬ್ಬವನ್ನ ದಸರಾ ಎಂದು ಕರೆಯಲಾಗುತ್ತೆ. ಆದ್ರೆ ಸರ್ಕಾರ ಯಾಕೆ ದಸರಾ ಎಂದು ಹೆಸರಿಟ್ಟಿದೆ  ಅದನ್ನ ಅವರನ್ನೇ ಕೆಳಬೇಕು ಎಂದು ಪ್ರಮೋದದೇವಿ ಒಡೆಯರ್ ಸರ್ಕಾರದ ವಿರುದ್ದ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bidadi Township: ಇಂದು ಬೈರಮಂಗಲದಲ್ಲಿ ಮಧ್ಯಾಹ್ನತನಕ ಕಾಯ್ತೇನೆ, ಸಿಎಂ ಬರಲಿ: ಎಚ್‌ಡಿಕೆ
School Timing: ಶನಿವಾರ ಸರ್ಕಾರಿ ಶಾಲಾ ಸಮಯ ಬದಲಾವಣೆ: ಇಂದಿನಿಂದಲೇ ಜಾರಿ! ಹೊಸ ಟೈಮಿಂಗ್ ಏನು?